ಮತ್ತೆ ವೋಟರ್ಸ್ ಲಿಸ್ಟ್ ನೋಂದಣಿ ಯಾವಾಗ?
ಬೆಂಗಳೂರು, ಏ. 21:ಇನ್ನೇನು ರಾಜ್ಯದಲ್ಲಿ ಹಾಲಿ ಲೋಕಸಭಾ ಚುನಾವಣೆಯ ಕಾವು ಮುಗಿಯುತ್ತಿದೆ. ರಾಜ್ಯದ ಮಟ್ಟಿಗೆ 28 ಸಂಸದರನ್ನು ವಿಜಯೀಭವ ಎಂದು ಅನಿಲ್ ಕುಮಾರ್ ಝಾ ನೇತೃತ್ವದ ರಾಜ್ಯ ಚುನಾವಣಾ ಆಯೋಗದ ಘೋಷಿಸಿಬಿಟ್ಟರೆ ಆಯೋಗದ ಕೆಲಸ ಮುಗಿದಂತೆ.
ಆದರೆ
ರಾಜ್ಯ
ಮುಖ್ಯ
ಚುನಾವಣಾಧಿಕಾರಿ
ಅನಿಲ್
ಕುಮಾರ್
ಝಾ
ಅವರದು
ಸುಮ್ಮನೆ
ಕೂಡುವ
ಮನಸ್ಸಲ್ಲ.
ಹಾಗಾಗಿಯೇ,
ಮೊನ್ನೆ
ಮುಗಿದ
ಚುನಾವಣೆಯಲ್ಲಿ
ಮತ
ಚಲಾಯಿಸಲು
ಸಾಧ್ಯವಾಗದೆ
ಕೈಕೈ
ಹೊಸುಕಿಕೊಂಡವರಿಗೆ
ಅವಕಾಶ
ಕಲ್ಪಿಸಲು
ಝಾ
ಈಗಿಂದಲೇ
ಕಾರ್ಯೋನ್ಮುಖರಾಗಿದ್ದಾರೆ.
ಮತ್ತೆ
ವೋಟರ್ಸ್
ಲಿಸ್ಟಿಗೆ
ಹೆಸರು
ಸೇರ್ಪಡ್ಸೋದು
ಯಾವಾಗ?
ಎಂದು
ಕೇಳುವವರಿಗಾಗಿ
ರಾಜ್ಯ
ಮುಖ್ಯ
ಚುನಾವಣಾಧಿಕಾರಿ
ಅನಿಲ್
ಕುಮಾರ್
ಝಾ
ಅವರು
ಈ
ವಿಷಯವನ್ನು
ಖಚಿತಪಡಿಸಿದ್ದಾರೆ.
ಹೊಸದಾಗಿ
ಮತದಾರರ
ಪಟ್ಟಿಗೆ
ಹೆಸರು
ಸೇರ್ಪಡೆ
ಮಾಡಿಕೊಳ್ಳಲು
ಮತ್ತೊಮ್ಮೆ
ಕಾಲಾವಕಾಶ
ನೀಡಲಾಗುವುದು.
ಪ್ರಸಕ್ತ
ಲೋಕಸಭೆ
ಚುನಾವಣೆಗೆ
ಹೆಸರು
ನೋಂದಾಯಿಸಿಕೊಳ್ಳಲು
ಮಾರ್ಚ್
16
ರವರೆಗೆ
ಗಡುವು
ನೀಡಲಾಗಿತ್ತು.
ಆದರೂ
ಎಲ್ಲಾ
ಅರ್ಹ
ಮತದಾರರು
ತಮ್ಮ
ಹೆಸರನ್ನು
ನೋಂದಾಯಿಸಿಕೊಳ್ಳಲು
ಸಾಧ್ಯವಾಗಿಲ್ಲ.
ಅಲ್ಲದೆ
ಕೊನೆ
ಘಳಿಗೆಯಲ್ಲಿ
ಅತಿ
ಹೆಚ್ಚಿನ
ಸಂಖ್ಯೆಯಲ್ಲಿ
ಜನರು
ತಮ್ಮ
ಹೆಸರನ್ನು
ಮತದಾರರ
ಪಟ್ಟಿಗೆ
ನೋಂದಾಯಿಸಿಕೊಂಡಿದ್ದಾರೆ.
ನೋಂದಾಯಿಸಿಕೊಂಡ
ಎಲ್ಲರಿಗೂ
ಈ
ಬಾರಿ
ಮತದಾನ
ಮಾಡುವ
ಭಾಗ್ಯ
ದೊರೆತಿಲ್ಲ.
ಚುನಾವಣೆ
ಪ್ರಕ್ರಿಯೆ
ಇಲ್ಲದಿರುವುದರಿಂದ
ಜೂನ್
ತಿಂಗಳಿಂದ
ಮತದಾರರ
ಪರಿಷ್ಕರಣೆ
ವ್ಯವಸ್ಥಿತವಾಗಿ
ನಡೆಯಲಿದೆ
ಈ ಚುನಾವಣೆಯಲ್ಲಿ ಹೆಸರು ಬಿಟ್ಟು ಹೋಗಿರುವವರು ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ವಯಸ್ಸು, ಹೆಸರು, ಲಿಂಗ, ಪತಿ, ಪತ್ನಿ, ತಂದೆ ಹೆಸರಿನಲ್ಲಿ ವ್ಯತ್ಯಾಸ, ಕಾಗುಣಿತದ ದೋಷಗಳು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು. ಈ ಸದವಕಾಶವನ್ನು ಜನರು ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗ ಮತ್ತೊಂದು ಅವಕಾಶವನ್ನು ನೀಡಲಿದೆ.