ಬೆಂಗಳೂರು : ಜೈ ಭುವನೇಶ್ವರಿ ಸ್ಲಂ ತೆರವಿಗೆ ವಿರೋಧ
ಬೆಂಗಳೂರು, ಜೂ. 4 : ಬೆಂಗಳೂರಿನ ಸಿದ್ದಾಪುರ ಬಳಿಯ ಜೈ ಭುವನೇಶ್ವರಿ ಸ್ಲಂ ಒತ್ತುವರಿ ತೆರವಿಗೆ ಮುಂದಾದ ಬಿಬಿಎಂಪಿ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, 100ಕ್ಕೂ ಹೆಚ್ಚು ನಿವಾಸಿಗಳನ್ನು ಬಂಧಿಸಲಾಗಿದೆ.
ಬುಧವಾರ
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
ಅಧಿಕಾರಿಗಳು
ಜೈ
ಭುವನೇಶ್ವರಿ
ಸ್ಲಂ
ತೆರವುಗೊಳಿಸಲು
ಆಗಮಿಸಿದ್ದರು.
ಇದನ್ನು
ವಿರೋಧಿಸಿ
ಸ್ಥಳೀಯ
ನಿವಾಸಿಗಳು
ಪ್ರತಿಭಟನೆ
ನಡೆಸಿದರು.
ಇದರಿಂದಾಗಿ
ಪೊಲೀಸರು
ಮತ್ತು
ನಿವಾಸಿಗಳ
ನಡುವೆ
ಮಾತಿನ
ಚಕಮಕಿ
ನಡೆಯಿತು.
ಪೊಲೀಸರು
ಲಾಠಿ
ಪ್ರಹಾರ
ನಡೆಸಿ
ಪರಿಸ್ಥಿತಿ
ತಿಳಿಗೊಳಿಸಲು
ಯತ್ನಿಸುತ್ತಿದ್ದಾರೆ.
ಜೈ ಭುನೇಶ್ವರಿ ಸ್ಲಂನಲ್ಲಿ 512 ಮನೆಗಳಿವೆ ಅವುಗಳನ್ನು ತೆರವುಗೊಳಿಸಲು ಹಿಂದೆ ನೋಟಿಸ್ ನೀಡಲಾಗಿದೆ. ಆದರೂ ತೆರವುಗೊಳಿಸಿದ ಹಿನ್ನಲೆಯಲ್ಲಿ ಇಂದು ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸ್ಲಂ ನಿವಾಸಿಗಳು ಇದನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದು, ಪೊಲೀಸರ ಮೇಲೆ ಸೀಮೆಎಣ್ಣೆ, ಕೊಡಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನಲೆಯಲ್ಲಿ ಪೊಲೀಸರು ಧರಣಿ ನಡೆಸುತ್ತಿದ್ದ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಆದರೆ, ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ಮುಂದುವರೆಸಿದ್ದು, ಮನೆಗಳನ್ನು ತೆರವುಗೊಳಿಸಲು ಅಡ್ಡಿಉಂಟಾಗಿದೆ.
900 ಮನೆಗಳಿವೆ : ಪ್ರತಿಭಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸ್ಥಳೀಯ ನಿವಾಸಿ ಮೇರಿ ಇಲ್ಲಿ 900ಕ್ಕೂ ಹೆಚ್ಚು ಮನೆಗಳಿವೆ. ನಾವೆಲ್ಲ ಬಡವರಾಗಿದ್ದು, ಅಕ್ಕಪಕ್ಕದಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಹತ್ತಿರದ ಶಾಲೆಗೆ ಕಳುಹಿಸುತ್ತಿ ಜೀವನ ನಡೆಸುತ್ತಿದ್ದೇವೆ. ಆದರೆ, ಬಿಬಿಎಂಪಿ ಅಧಿಕಾರಿಗಳು ನಮಗೆ ಯಾವುದೇ ಸೂಚನೆ ನೀಡಿದೆ ಏಕಾಏಕಿ ಸ್ಲಂ ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೈಕೋರ್ಟ್ ತಡೆ : ಜೈ ಭುವನೇಶ್ವರಿ ನಗರ ಸ್ಲಂ ತೆರವುಗೊಳಿಸಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಸ್ಲಂನ 120 ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಧ್ಯಂತರ ಆದೇಶವನ್ನು ಬುಧವಾರ ಮಧ್ಯಾಹ್ನ ನೀಡಿದೆ.