ಬಿಬಿಎಂಪಿ ವಿಭಜನೆಗೆ ಕುರಿತು ವರದಿ ನೀಡಲು ತಜ್ಞರ ಸಮಿತಿ
ಬೆಂಗಳೂರು, ಸೆ. 23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ವಿಭಜನೆಯತ್ತ ರಾಜ್ಯ ಸರ್ಕಾರ ಗಮನಹರಿಸಿದ್ದು, ಪಾಲಿಕೆಯನ್ನು ವಿಭಜಿಸುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸಿದೆ. ಮೂರು ತಿಂಗಳಿನಲ್ಲಿ ಈ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಸೋಮವಾರ
ಸಂಜೆ
ಸರ್ಕಾರ
ಈ
ಕುರಿತು
ಆದೇಶ
ಹೊರಡಿಸಿದ್ದು,
ಸರ್ಕಾರದ
ನಿವೃತ್ತ
ಮುಖ್ಯ
ಕಾರ್ಯದರ್ಶಿ
ಬಿ.ಎಸ್.
ಪಾಟೀಲ್
ಅವರು
ಸಮಿತಿಯ
ಅಧ್ಯಕ್ಷರಾಗಿದ್ದಾರೆ.
ಉಳಿದಂತೆ
ಬಿಬಿಎಂಪಿ
ಆಯುಕ್ತರಾಗಿದ್ದ
ಐಎಎಸ್
ಅಧಿಕಾರಿ
ಸಿದ್ದಯ್ಯ,
ಬೆಂಗಳೂರು
ಅಜೆಂಡಾ
ಟಾಸ್ಕ್ಫೋರ್ಸ್
(ಅಬೈಡ್)
ಮಾಜಿ
ಸದಸ್ಯ
ರವಿಚಂದರ್
ಅವರು
ಸಮಿತಿ
ಸದಸ್ಯರು.
ಬಿಬಿಎಂಪಿ ವಿಭಜನೆ ಕುರಿತು ಸಾರ್ವಜನಿಕರ ಸಲಹೆ ಪಡೆದು, ಅಧ್ಯಯನ ಮಾಡಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚನೆ ನೀಡಿಲಾಗಿದೆ. ಬಿಬಿಎಂಪಿಯನ್ನು ವಿಭಜನೆ ಮಾಡುವ ಪ್ರಸ್ತಾಪವನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಈ ಬಗ್ಗೆ ಪರ ವಿರೋಧವಾದಗಳು ಕೇಳಿಬಂದ ಹಿನ್ನಲೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. [ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ]
198 ವಾರ್ಡ್ಗಳನ್ನು ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿದರೆ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪಾಲಿಕೆ ವಿಭಜಿಸುವುದು ಒಳ್ಳೆಯದು ಎಂಬುದು ಸರ್ಕಾರದ ವಾದ. [ಬಿಬಿಎಂಪಿ ವಿಭಜನೆ ಪ್ರಸ್ತಾಪ ಸ್ವೀಕರಿಸಿದ ಸರ್ಕಾರ]
ಆದರೆ, ಬಿಬಿಎಂಪಿಯ ಹಲವು ಸದಸ್ಯರು ಪಾಲಿಕೆ ವಿಭಜನೆ ಮಾಡಬೇಕಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಾಲಿಕೆಯ ವಿಶೇಷ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದ್ದರಿಂದ ಸದ್ಯ, ಸರ್ಕಾರ ತ್ರಿ ಸದಸ್ಯ ಸಮಿತಿಯನ್ನು ರಚನೆ ಮಾಡಿದ್ದು, ಪಾಲಿಕೆ ವಿಭಜನೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಆದೇಶಿಸಿದೆ.