ಆನ್ ಲೈನ್ ನಲ್ಲಿ ಪುಸ್ತಕ ಬಿಡುಗಡೆ ಲೈವ್
ಬೆಂಗಳೂರು, ಫೆ. 12: ಕಿರಣ್ ಬಾಟ್ನಿ ಅವರ ''ದಿ ಪಿರಮಿಡ್ ಆಫ್ ಕರಪ್ಶನ್'' ಪುಸ್ತಕದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ವಿಶೇಷವೆಂದರೆ ಈ ಪುಸ್ತಕ ಆನ್ ಲೈನ್ ನಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಕಾರ್ಯಕ್ರಮದ ಲೈವ್ ಕವರೇಜ್ ಎಲ್ಲರಿಗೂ ಲಭ್ಯವಾಗಲಿದೆ.
ಭ್ರಷ್ಟಾಚಾರವೆಂದರೆ
ಸರಕಾರಿ
ನೌಕರರು
ಮತ್ತು
ರಾಜಕಾರಣಿಗಳು
ಲಂಚ
ತೆಗೆದುಕೊಳ್ಳುವುದು
ಇಲ್ಲವೇ
ಸಾರ್ವಜನಿಕರ
ದುಡ್ಡನ್ನು
ಒಂದಲ್ಲ
ಒಂದು
ರೀತಿಯಲ್ಲಿ
ನುಂಗುವುದು
ಎಂಬ
ಅನಿಸಿಕೆ
ನಮ್ಮಲ್ಲಿ
ಎಲ್ಲರಿಗೂ
ಇದೆ.
ಆದರೆ
ನಿಜಕ್ಕೂ
ಭ್ರಷ್ಟಾಚಾರವೆಂದರೆ
ಇಷ್ಟೇ
ಏನು?
ಒಂದು
ವ್ಯವಸ್ಥೆ
ಹೇಗೆ
ನಡೆಯಬೇಕೋ
ಹಾಗೆ
ನಡೆಯದೆ
ಅಡ್ಡದಾರಿಯಲ್ಲಿ
ನಡೆಯುವುದನ್ನು
ಮಾತ್ರ
ಭ್ರಷ್ಟಾಚಾರವೆನ್ನಬೇಕೇ?
ಹಾಗಾದರೆ
ಆ
ವ್ಯವಸ್ಥೆಯೇ
ಅಡ್ಡದಾರಿಯಲ್ಲಿ
ನಡೆಯುತ್ತಿದ್ದರೆ
ಏನು
ಮಾಡುವುದು?
ಭಾರತದ
ಸಂವಿಧಾನದಲ್ಲೇ
ಭ್ರಷ್ಟಾಚಾರ
ಅಡಗಿ
ಕುಳಿತಿರಲು
ಸಾಧ್ಯವೇ?
ಕುಳಿತಿದ್ದರೆ
ಅದರ
ಸ್ವರೂಪವೆಂಥದ್ದು?
ಅದರಿಂದ
ಆಗಿರುವ,
ಆಗುತ್ತಿರುವ
ಮತ್ತು
ಮುಂದೆಯೂ
ಆಗಲಿರುವ
ಕೆಡಕು
ಎಂಥದ್ದು?
ಅದನ್ನು
ತಡಗಟ್ಟುವುದಾದರೂ
ಹೇಗೆ?
ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ ಹೊರಟ ಕನ್ನಡದ ಯುವ ಬರಹಗಾರ ಹಾಗೂ ''ಹೊನಲು'' ಅಂತರ್ಜಾಲ ತಾಣದ ಮುಖ್ಯ ಸಂಪಾದಕರಾದ ಕಿರಣ್ ಬಾಟ್ನಿ ಅವರು ತಮ್ಮ ಚಿಂತನೆಯನ್ನು ಕನ್ನಡರಿಗಷ್ಟೇ ಅಲ್ಲದೆ ಕನ್ನಡೇತರರಿಗೂ ತಲುಪಿಸಲು ಇಂಗ್ಲಿಶಿನ ಒಂದು ಪುಸ್ತಕದಲ್ಲಿ ಸೆರೆ ಹಿಡಿದಿದ್ದಾರೆ.
"ದಿ ಪಿರಮಿಡ್ ಆಫ್ ಕರಪ್ಶನ್" ಎಂಬ ಹೆಸರಿನ ಈ ಇಂಗ್ಲೀಷ್ ಪುಸ್ತಕ ಶನಿವಾರ ಫೆಬ್ರವರಿ 15 ರಂದು ಬೆಳಗ್ಗೆ 11:00 ಗಂಟೆಗೆ ಬಿಡುಗಡೆಯಾಗಲಿದೆ.
ವಿಶೇಷವೇನೆಂದರೆ, ಈ ಬಿಡುಗಡೆ ಇತರ ಪುಸ್ತಕ ಬಿಡುಗಡೆಗಳಂತೆ ಒಂದು ಸಭಾಮಂದಿರದಲ್ಲಿ ನಡೆಯುವುದಿಲ್ಲ, ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ನಡೆಯಲಿದೆ! ಪಾಲ್ಗೊಳ್ಳಲು ಇಲ್ಲಿ ಕ್ಲಿಕ್ಕಿಸಿ
ಪುಸ್ತಕ ಮತ್ತು ಬರಹಗಾರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಹಾಗೂ ಪುಸ್ತಕದ ಉಚಿತ ಮೊದಲ ಅಧ್ಯಾಯಕ್ಕಾಗಿ http://kiranbatni.com ತಾಣಕ್ಕೆ ಒಮ್ಮೆ ಭೇಟಿ ಕೊಡಿ. ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ
ಕಿರಣ್ ಬಾಟ್ನಿ ಬಗ್ಗೆ: 1976ರಿಂದ ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಕಿರಣ್ ಅವರು Karnatique ಇಂಗ್ಲೀಷ್ ಬ್ಲಾಗ್ ಹಾಗೂ ಕನ್ನಡ ಮ್ಯಾಗಜೀನ್ ಹೊನಲು ಮುಖ್ಯ ಸಂಪಾದಕರಾಗಿದ್ದಾರೆ. ಡಿಎನ್ ಎಸ್ ಭಟ್ ಅವರ ನುಡಿಯರಿಮೆಯ ಇಣುಕುನೋಟ ಕೃತಿಯನ್ನು ಸಂಪಾದಿಸಿದ್ದಾರೆ. ತತ್ವಶಾಸ್ತ್ರ, ರಾಜಕೀಯ, ಅರ್ಥಶಾಸ್ತ್ರದ ಬಗ್ಗೆ ಸಂಶೋಧನೆ ಮಾಡಿರುವ ಕಿರಣ್ ಅವರು ಐಐಟಿ, ದೆಹಲಿಯಿಂದ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಹಲವು ದೇಶಗಳನ್ನು ಸುತ್ತಿ ಅಧ್ಯಯನ ನಡೆಸಿ ಹಲವಾರು ಸಂಸ್ಕೃತಿಯನ್ನು ತುಲನೆ ಮಾಡಿದ್ದಾರೆ.
ಕಿರಣ್ ಅವರ ಟ್ವಿಟ್ಟರ್ | ಫೇಸ್ ಬುಕ್ |