ನನ್ನ ಮತ್ತು ಸಿಎಂ ಹುದ್ದೆಗೆ ಆಪತ್ತಿಲ್ಲ : ಪರಮೇಶ್ವರ್
ಬೆಂಗಳೂರು, ಏ. 18 : "ಕರ್ನಾಟಕದಲ್ಲಿನ ಲೋಕಸಭೆ ಚುನಾವಣೆ ಫಲಿತಾಂಶ ಏನೇ ಆಗಲಿ ನನ್ನ ಮತ್ತು ಸಿಎಂ ಸಿದ್ದರಾಮಯ್ಯ ಅವರ ಹುದ್ದೆಗಳಿಗೆ ಯಾವುದೇ ಆಪತ್ತಿಲ್ಲ. ಇಷ್ಟು ಸ್ಥಾನ ಗೆಲ್ಲಬೇಕು ಎಂದು ಹೈ ಕಮಾಂಡ್ ನಾಯಕರು ನಮಗೆ ಯಾವುದೇ ಟಾರ್ಗೆಟ್ ನೀಡಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ
ಕೆಪಿಸಿಸಿ
ಕಚೇರಿಯಲ್ಲಿ
ಪ್ರತಿಕಾಗೋಷ್ಠಿ
ನಡೆಸಿದ
ಡಾ.ಜಿ.ಪರಮೇಶ್ವರ್,
ಲೋಕಸಭೆ
ಚುನಾವಣೆ
ಫಲಿತಾಂಶ
ಏನೇ
ಆಗಲಿ,
ಮುಖ್ಯಮಂತ್ರಿ
ಬದಲಾವಣೆ
ಇಲ್ಲ
ಎಂದು
ಹೇಳಿದರು.
ಸೋಲು-ಗೆಲುವಿನ
ಹೊಣೆಯನ್ನು
ನಾನು
ಮತ್ತು
ಸಿಎಂ
ಸಿದ್ದರಾಮಯ್ಯ
ಜಂಟಿಯಾಗಿ
ಹೊರುತ್ತೇವೆ
ಎಂದು
ತಿಳಿಸಿದರು.
ಕರ್ನಾಟಕದಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಹೈಕಮಾಂಡ್ ನಾಯಕರು ಭರವಸೆ ಹೊಂದಿದ್ದಾರೆ. ಆ ವಿಶ್ವಾಸ ನಮಗೂ ಇದ್ದು, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ನರೇಂದ್ರ ಮೋದಿ ಅಲೆ ಇಲ್ಲ ಎಂದು ಸಾಬೀತುಪಡಿಸಲಿದೆ ಎಂದು ಹೇಳಿದರು. [ಸಿಎಂಗೆ ಎಚ್ಚರಿಕೆ ನೀಡಿದ್ದು ನಿಜವಂತೆ]
ಚುನಾವಣೆ ಫಲಿತಾಂಶದ ಪ್ರಕಟವಾದ ಬಳಿಕ ಕಾಂಗ್ರೆಸ್ 15ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಸಿಎಂ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ. ಹೈಕಮಾಂಡ್ ನಾಯಕರು ಇಷ್ಟು ಸ್ಥಾನಗಳನ್ನು ಗೆಲ್ಲಬೇಕು ಎಂದು ನಮಗೆ ಯಾವುದೇ ಟಾರ್ಗೆಟ್ ನೀಡಿಲ್ಲ ಎಂದರು. [ನಾಲ್ಕು ವರ್ಷ ನಾನೇ ಸಿಎಂ : ಸಿದ್ದರಾಮಯ್ಯ]
ಹೆಚ್ಚು ಸ್ಥಾನಗಳಿಸಲು ಶ್ರಮವಹಿಸಿ ಕೆಲಸ ಮಾಡಿ ಎಂದು ಹೈಕಮಾಂಡ್ ನಾಯಕರು ಸೂಚನೆ ನೀಡಿರುವುದು ನಿಜ. ಅದರಂತೆ ನಾನು ಮತ್ತು ಸಿದ್ದರಾಮಯ್ಯ ರಾಜ್ಯದ ತುಂಬಾ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದೇವೆ. ಎಲ್ಲಕಡೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಜನರು ಹೇಳಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಕನಿಷ್ಠ 20 ಸ್ಥಾನಗಳಲ್ಲಿ ಜಯ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ ಪರಮೇಶ್ವರ್, ಮೈಸೂರು, ಚಾಮರಾಜನಗರ, ಬೀದರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ ಎಂದು ದೂರಿದರು.
ಮತದಾನ ಪೂರ್ಣಗೊಂಡಿದೆ. ನಿಗಮ-ಮಂಡಳಿ ನೇಮಕಾತಿಗೆ ಚಾಲನೆ ನೀಡಲಾಗಿದ್ದು, ಫಲಿತಾಂಶ ಪ್ರಕಟಗೊಂಡ ನಂತೆ ನೇಮಕಾತಿ ನಡೆಯಲಿದೆ. ಚುನಾವಣೆ ಮುಗಿದಿರುವುದರಿಂದ ನಾವು ಮತ್ತು ಪ್ರತಿಪಕ್ಷಗಳು ಎಲ್ಲರೂ ಒಂದಾಗಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.