ಬೆಂಗಳೂರಿನಲ್ಲಿ ಮಹಿಳೆಯ ಅಪಹರಣ, ಸಾಮೂಹಿಕ ಅತ್ಯಾಚಾರ
ಬೆಂಗಳೂರು, ಸೆ.8 : ನೇಪಾಳ ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಮಹಿಳೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ
ಮಧ್ಯಾಹ್ನ
ಪತಿಗೆ
ಊಟ
ನೀಡಿ
ಮನೆಗೆ
ವಾಪಸ್ಸಾಗುತ್ತಿದ್ದ
35
ವರ್ಷದ
ಮಹಿಳೆಯನ್ನು
ಬೆದರಿಸಿ
ಆಟೋದಲ್ಲಿ
ಅಪಹರಿಸಿದ
ನಾಲ್ವರು
ಸಾಮೂಹಿಕ
ಅತ್ಯಾಚಾರ
ನಡೆಸಿದ್ದಾರೆ.
ಕೆ.ಆರ್.ಪುರಂ
ಸಮೀಪ
ಈ
ಪ್ರಕರಣ
ನಡೆದಿದ್ದು,
ಸೋಮವಾರ
ಬೆಳಗ್ಗೆ
ಮಹಿಳೆಯ
ಪತಿ
ಈ
ಕುರಿತು
ರಾಮಮೂರ್ತಿ
ನಗರ
ಪೊಲೀಸರಿಗೆ
ದೂರು
ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ (20), ಮಹದೇವ ಭಟ್ (24), ಸುನೀಲ್ (26) ಮತ್ತು ಜಗದೀಶ್ (30) ಎಂಬುವವರನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. [ಅತ್ಯಾಚಾರ ಆರೋಪಿ ಶಿವಸೇನಾ ಮುಖಂಡ ಬಂಧನ]
ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ನಿರ್ಮಾಣ ಹಂತದ ಅಪಾರ್ಟ್ಮೆಂಟ್ಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅತ್ಯಾಚಾರದ ಬಳಿಕ ಆಟೋದಲ್ಲಿ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಮಹಿಳೆಯ ಪತಿ ಕೆಲಸದಿಂದ ಮರಳಿದ ಬಳಿಕ ಮಹಿಳೆ ಈ ಕುರಿತು ಮಾಹಿತಿ ನೀಡಿದ್ದು. ಇಂದು ಬೆಳಗ್ಗೆ ದೂರು ದಾಖಲಿಸಿದ್ದಾರೆ. [ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ]
ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಬಿಹಾರ ಮೂಲದ ಯುವತಿಯನ್ನು ಅಪಹರಿಸಿ ಚಿಕ್ಕಮಾರನಹಳ್ಳಿ ರೆಸಾರ್ಟ್ನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿರುವ ಆ.21ರಂದ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. [ಬಿಹಾರ ಯುವತಿ ಮೇಲೆ ಅತ್ಯಾಚಾರ]