ಯುಗಾದಿಗಾಗಿ ಕೆಎಸ್ಆರ್ ಟಿಸಿಯಿಂದ ವಿಶೇಷ ಬಸ್ಸುಗಳು
ಬೆಂಗಳೂರು, ಮಾ.26 : ಲೋಕಸಭೆ ಚುನಾವಣೆ ಕಾವಿನ ನಡುವೆಯೇ ಯುಗಾದಿ ಹಬ್ಬ ಬಂದಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯುಗಾದಿ ಹಬ್ಬಕ್ಕಾಗಿ ಹೊರ ಊರಿಗೆ ತೆರಳುವ ಜನರಿಗಾಗಿ ವಿಶೇಷ ಬಸ್ ಸೌಲಭ್ಯಗಳನ್ನು ಒದಗಿಸಿದಿದೆ. 400 ರಿಂದ 450 ವಿಶೇಷ ಬಸ್ಸುಗಳು ಮಾ.28ರಿಂದ 30ರ ವರೆಗೆ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
ಮಾರ್ಚ್
31ರ
ಸೋಮವಾರ
ಚಂದ್ರಮಾನ
ಯುಗಾದಿ,
ಜನರು
ಶನಿವಾರ
ಮತ್ತು
ಭಾನುವಾರ
ತಮ್ಮ
ಊರಿಗೆ
ಪ್ರಯಾಣ
ಬೆಳಸಲಿದ್ದಾರೆ.
ಆದ್ದರಿಂದ,
ಕೆಎಸ್ಆರ್
ಟಿಸಿ
ವಿಶೇಷ
ಬಸ್
ಸೌಲಭ್ಯವನ್ನು
ಒದಗಿಸಿದೆ.
ಈ
ವಿಶೇಷ
ಬಸ್ಸುಗಳಿಗೆ
ಟಿಕೆಟ್
ಬುಕ್
ಮಾಡಿಸಲು
ಬೆಂಗಳೂರಿನಲ್ಲಿ
173,
ಮೈಸೂರಿನಲ್ಲಿ
14,
ಮಂಗಳೂರಿನಲ್ಲಿ
54
ಸೇರಿದಂತೆ
ರಾಜ್ಯದ
ವಿವಿಧ
ಜಿಲ್ಲೆಗಳಲ್ಲಿ
230
ಕೌಂಟರ್
ಗಳನ್ನು
ತೆರೆಯಲಾಗಿದೆ.
ವಿಶೇಷ ಬಸ್ಸುಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಿಎಂಟಿಸಿ ನಿಲ್ದಾಣ, ಜೆ.ಪಿ.ನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ವಿಜಯನಗರ, ಮಲ್ಲೇಶ್ವರಂ 18ನೇ ಕ್ರಾಸ್, ಗಂಗಾನಗರ, ಬನಶಂಕರಿ, ಯಶವಂತಪುರ ಮತ್ತು ಕೆಂಗೇರಿ ಬಸ್ ನಿಲ್ದಾಣಗಳಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ. [ಕೆಎಸ್ಆರ್ ಟಿಸಿ ವೆಬ್ ಸೈಟ್]
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ : ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಶೇಷ ಬಸ್ ಗಳು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಗುಲ್ಬರ್ಗ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮಾರ್ಗದಲ್ಲಿ ಪ್ರಯಾಣ ಬೆಳೆಸಲಿವೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಸ್ಯಾಟಲೈಟ್ ನಿಲ್ದಾಣದಿಂದ : ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗದ ಬಸ್ಸುಗಳು ಸಂಚರಿಸಲಿವೆ.[2014ರ ಸರ್ಕಾರಿ ರಜಾ ಪಟ್ಟಿ]
ಶಾಂತಿನಗರ ಬಸ್ ನಿಲ್ದಾಣ : ಶಾಂತಿನಗರ ಬಸ್ ನಿಲ್ದಾಣದಿಂದ ಮಧುರೈ, ಕುಂಬಕೋಣಂ, ತಿರುಚಿ, ಚೆನ್ನೈ, ಕೊಯಮುತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ಆಂಧ್ರಪ್ರದೇಶ ಮತ್ತು ತಮಿಳುನಾಡು ಕಡೆಗೆ ಬಸ್ಸುಗಳು ಸಂಚರಿಸಲಿವೆ.
ಈ ನಿಲ್ದಾಣಗಳಿಂದಲೂ ಬಸ್ ಸೌಲಭ್ಯ : ಜೆ.ಪಿ.ನಗರ, ಜಯನಗರ 4ನೇ ಹಂತ, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರಂ 18ನೇ ಕ್ರಾಸ್, ವಿಜಯನಗರ, ಗಂಗಾನಗರ, ಬನಶಂಕರಿ, ಯಶವಂತಪುರ, ಕೆಂಗೇರಿ ಬಸ್ ನಿಲ್ದಾಣಗಳಿಂದ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳಗಳಿಗೆ ಬಸ್ಸುಗಳು ತೆರಳಿವೆ.
ವಿಶೇಷ ಬಸ್ಸುಗಳು : ಮೈಸೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಗೋಕರ್ಣ, ಶಿರಸಿ, ಕಾರವಾರ, ಗುಲ್ಬರ್ಗ, ಬಳ್ಳಾರಿ, ರಾಯಚೂರು ಮತ್ತು ಬೀದರ್ ಗೆ ಕಡೆಗೆ ವಿಶೇಷ ಬಸ್ಸುಗಳು ಸಂಚರಿಸಲಿವೆ. ಇವು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ ವಿಶೇಷ ಬಸ್ ಗಳಾಗಿವೆ.