ಆಸ್ಪತ್ರೆಗೆ ಹಾರಿದ ಜೈಲುಹಕ್ಕಿ ಜನಾರ್ದನ ರೆಡ್ಡಿ!
ಬೆಂಗಳೂರು, ಜು.25 : ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಮುಂಜಾನೆ ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪರಪ್ಪನ
ಅಗ್ರಹಾರ
ಜೈಲಿನಲ್ಲಿದ್ದ
ಜನಾರ್ದನ
ರೆಡ್ಡಿ
ಅವರನ್ನು
ಹೆಬ್ಬಾಳದಲ್ಲಿರುವ
ಕೊಲಂಬಿಯಾ
ಏಷ್ಯಾ
ಆಸ್ಪತ್ರೆಗೆ
ಶುಕ್ರವಾರ
ಮುಂಜಾನೆ
ದಾಖಲಿಸಲಾಗಿದೆ.
ಜನಾರ್ದನ
ರೆಡ್ಡಿ
ಅವರಿಗೆ
ಬೆನ್ನು
ನೋವು
ಕಾಣಿಸಿಕೊಂಡ
ಹಿನ್ನಲೆಯಲ್ಲಿ
ಅವರನ್ನು
ಆಸ್ಪತ್ರೆಗೆ
ದಾಖಲಿಸಲಾಗಿದೆ
ಎಂದು
ತಿಳಿದುಬಂದಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹಿಂದಿನಿಂದಲೂ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಫೆಬ್ರವರಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಜನಾರ್ದನ ರೆಡ್ಡಿಗೆ ಅವರಿಗೆ ಅನುಮತಿ ನೀಡಿತ್ತು. ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸ್ವಂತ ಖರ್ಚಿನಲ್ಲಿ ರೆಡ್ಡಿ ಚಿಕಿತ್ಸೆ ಪಡೆದಿದ್ದರು. [ಜನಾರ್ದನ ರೆಡ್ಡಿಗೆ ಮೂರು ತಿಂಗಳು ಜಾಮೀನಿಲ್ಲ]
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಸುಮಾರು ಮೂರು ವರ್ಷಗಳಿಂದ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಸಲ್ಲಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. ಇನ್ನು ಮೂರು ತಿಂಗಳು ಜಾಮೀನು ಅರ್ಜಿ ಸಲ್ಲಿಸದಂತೆ ವಕೀಲರಿಗೆ ಸೂಚನೆ ನೀಡಿತ್ತು.
ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ 2011ರ ಸೆ. 5ರಂದು ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿಯ ಅವರ ನಿವಾಸದಲ್ಲಿ ಬಂಧಿಸಿದ್ದರು. ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.