ಮಲ್ಲೇಶ್ವರಂ ಜನರ ಸಮಸ್ಯೆಗೆ ಸ್ಪಂದಿಸಲು ವೆಬ್ಸೈಟ್
ಬೆಂಗಳೂರು, ಆ.20 : ಮಲ್ಲೇಶ್ವರಂ ಕ್ಷೇತ್ರದಲ್ಲಿ ಸಮಸ್ಯೆಗಳಿವೆಯೇ ತಕ್ಷಣ ವೆಬ್ಸೈಟ್ಗೆ ಭೇಟಿ ಕೊಟ್ಟು ದೂರು ನೀಡಿ. ಹೌದು ಕ್ಷೇತ್ರದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಲ್ಲೇಶ್ವರಂ.ಸಹಾಯ.ಇನ್ ವೆಬ್ಸೈಟ್ ಆರಂಭಿಸಿದ್ದಾರೆ.
ಮಂಗಳವಾರ
ಈ
ನೂತನ
ವೆಬ್ಸೈಟ್ಗೆ
ಬಿಜೆಪಿ
ರಾಷ್ಟ್ರೀಯ
ಸಹ
ಸಂಘಟನಾ
ಕಾರ್ಯದರ್ಶಿ
ಸಂತೋಷ್
ಚಾಲನೆ
ನೀಡಿದ್ದಾರೆ.
ಆಧುನಿಕ
ಕಾಲಘಟ್ಟದಲ್ಲಿ
ಜನರಿಗೆ
ಕಚೇರಿಗೆ
ತೆರಳಿ,
ಮನವಿ
ಪತ್ರ
ಸಲ್ಲಿಸಲು
ಸಮಯದ
ಕೊರತೆ
ಇದೆ.
ಆದ್ದರಿಂದ
ವೆಬ್ಸೈಟ್
ವ್ಯವಸ್ಥೆ
ಜನರಿಗೆ
ಸಹಕಾರಿಯಾಗಲಿದೆ
ಎಂದು
ಸಂತೋಷ್
ಹೇಳಿದರು.
ಜನರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ವೆಬ್ಸೈಟ್ ಆರಂಭಿಸಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ. ಜನರು ಬಿಬಿಎಂಪಿ ಸಮಸ್ಯೆ ಬಗ್ಗೆ ಜಲಮಂಡಳಿಗೆ ದೂರು ನೀಡುತ್ತಾರೆ ಆದ್ದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದನ್ನು ತಪ್ಪಿಸಲು ವೆಬ್ಸೈಟ್ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು. [ಮಲ್ಲೇಶ್ವರಂ.ಸಹಾಯ.ಇನ್ ವೆಬ್ ಸೈಟ್]
ದೂರು ನೀಡುವುದು ಹೇಗೆ ? : ದೂರು ನೀಡಬೇಕಾದ ಜನರು ಮೊದಲು ವೆಬ್ಸೈಟ್ ಭೇಟಿ ನೀಡಿ ಲಾಗಿನ್ ಆಗಬೇಕು. ನಂತರ ತಮ್ಮ ವಾರ್ಡ್, ಸಮಸ್ಯೆ ಯಾವುದು, ಯಾವ ಇಲಾಖೆಗೆ ಸಂಬಂಧಿಸಿದ್ದು ಮುಂತಾದ ವಿವರಗಳನ್ನು ಒದಗಿಸಬೇಕು. ಸಮಸ್ಯೆಯ ಬಗ್ಗೆ ಛಾಯಾಚಿತ್ರಗಳನ್ನು ಇಲ್ಲಿ ಹಾಕಲು ಅವಕಾಶವಿದೆ. ಈ ದೂರನ್ನು ಸಂಬಂಧಿಸಿದ ಅಧಿಕಾರಿಗೆ ಕಳುಹಿಸುವ ವ್ಯವಸ್ಥೆ ಇದೆ. ಸಮಸ್ಯೆ ಬಗೆಹರಿಯುವ ತನಕ ಅದರ ಬಗ್ಗೆ ಗಮನ ಇಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ.
ನಾಗರಿಕರು ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಮತ್ತೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಶ್ವತ್ಥನಾರಾಯಣ್ ಹೇಳಿದ್ದಾರೆ. ಆರಂಭಿಕ ಹಂತದಲ್ಲಿ ಬಿಬಿಎಂಪಿ, ಜಲಮಂಡಳಿಯ ಸೇವೆಗಳನ್ನು ವೆಬ್ಸೈಟ್ನಲ್ಲಿ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.