RSSನಿಂದ ಪಾಠ ಕಲಿಯಿರಿ ಎಂದ ಎಸ್ಸೆಂ ಕೃಷ್ಣ
ಬೆಂಗಳೂರು, ಏಪ್ರಿಲ್ 3: ಲೋಕಸಭಾ ಚುನಾವಣೆ ಪ್ರಚಾರ ಭರದಲ್ಲಿ ಜನನಾಯಕರೆನಿಸಿಕೊಂಡವರು ತಲೆಗೊಂದರಂತೆ ಕೆಳಮಟ್ಟಕ್ಕಿಳಿದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೇಂದ್ರದ ಮಾಜಿ ಸಚಿವರೊಬ್ಬರು ಆರೆಸೆಸ್ಸಿನಿಂದ ಪಾಠ ಕಲಿಯಿರಿ ಎಂದು ಹೇಳಿದ್ದರೆ, ಮತ್ತೊಬ್ಬ ಮಾಜಿ ಸಚಿವ (ಬೇನಿ ಪ್ರಸಾದ್) 'ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಆರೆಸೆಸ್ಸಿನ ಗೂಂಡಾ' ಎಂದು ಬಣ್ಣಿಸಿದ್ದಾರೆ.
ಆರೆಸ್ಸೆಸ್ಸಿನ
ಸರಳ
ಭಗವದ್ಗೀತೆ
ಬೋಧಿಸಿದ
ಕೃಷ್ಣ:
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮತಯಾಚಿಸಲು ಶಿವಾಜಿನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೃಷ್ಣ ಅವರು ಸಂಘಪರಿವಾರದ ಸದಸ್ಯರಿಂದ ಇದೊಂದು ವಿಚಾರದಲ್ಲಿ ನಾವು ಪಾಠ ಕಲಿಯಬೇಕಾಗಿದೆ. ಅವರು ತಳಮಟ್ಟದಿಂದ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಕಿವಿಮಾತು ಹೇಳಿದರು.
ನಮ್ಮಲ್ಲಿ ಬಿಳಿ ಬಟ್ಟೆ ತೊಟ್ಟು ವೇದಿಕೆಯ ಮೇಲೆ ಪ್ರದರ್ಶನ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಹ್ಯ ಪ್ರದರ್ಶನ ಬಿಟ್ಟು ಆಂತರಿಕವಾಗಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಆರೆಸೆಸ್ಸಿನಂತೆ ಆಗಬೇಕಿದೆ ಎಂದು ಸೂಚ್ಯವಾಗಿ ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]