ನಾದಬ್ರಹ್ಮ ಹಂಸಲೇಖ, ಕಿರಣ್ ಷಾಗೆ ಬೆಂವಿವಿ ಡಾಕ್ಟರೇಟ್
ಬೆಂಗಳೂರು,ಮೇ 13: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯವು ಈ ಬಾರಿ ನಾಡಿನ 6 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.
ಹಂಸಲೇಖ,
ಕಿರಣ್
ಷಾಗೆ
ಗೌ.ಡಾ:
ಬೆಂಗಳೂರು
ವಿಶ್ವವಿದ್ಯಾಲಯವು
ತನ್ನ
49ನೇ
ಘಟಿಕೋತ್ಸವದ
ಅಂಗವಾಗಿ
ನಾದ
ಬ್ರಹ್ಮ
ಹಂಸಲೇಖ,
ಬಯೋಕಾನ್
ಸಂಸ್ಥಾಪಕಿ
ಕಿರಣ್
ಮಜೂಂದಾರ್
ಷಾ
ಸೇರಿದಂತೆ
ಒಟ್ಟು
6
ಮಂದಿಗೆ
ಇದೇ
ಮೇ
20ರಂದು
ಗೌರವ
ಡಾಕ್ಟರೇಟ್
ನೀಡಿ
ಗೌರವಿಸಲು
ತೀರ್ಮಾನಿಸಿದೆ.
ಅಧಿಕೃತ ಮೂಲಗಳ ಪ್ರಕಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಘಟಿಕೋತ್ಸವದಲ್ಲಿ ಪಾಲ್ಗೊಂಡು ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
65 ವರ್ಷದ ಮೂಲತಃ ಮೈಸೂರಿನವರಾದ ನಾದಬ್ರಹ್ಮ ಹಂಸಲೇಖ (ಗೋವಿಂದರಾಜು ಗಂಗರಾಜು) ಮತ್ತು ಈಗಾಗಲೇ ಹಲವಾರು ಡಾಕ್ಟರೇಟುಗಳನ್ನು ಪಡೆದಿರುವ ಕಿರಣ್ ಮಜೂಂದಾರ್ ಷಾ ಅವರ ಜತೆಗೆ ಹಿರಿಯ ಪತ್ರಕರ್ತ ಪಿ ರಾಮಯ್ಯ, ರಾಜಾಜಿನಗರ ಪೇರೆಂಟ್ಸ್ ಎಡುಕೇಶನ್ ಸೊಸೈಟಿಯ ಕಾರ್ಯದರ್ಶಿ ಜಿಬಿ ಪರಮಶಿವಯ್ಯ, ಶಿಕ್ಷಣ ತಜ್ಞ ಬಿಟಿ ಲಕ್ಷ್ಮಣ್ ಮತ್ತು ಮಾಜಿ ಮೇಲ್ಮನೆ ಸದಸ್ಯರಾದ ಎಸ್ಎಸ್ ಅರಕೆರೆ ಅವರುಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ.