ಕುಡಿದು ಬರುತ್ತಿದ್ದ ಮಗನನ್ನೇ ಕೊಲೆ ಮಾಡಿದರು
ಬೆಂಗಳೂರು, ಸೆ. 20: ಬೆಂಗಳೂರಿನ ಹನುಮಂತನಗರ ಶನಿವಾರ ಬೆಚ್ಚಿಬಿದ್ದಿದೆ. ಸ್ವತಃ ಕುಟುಂಬದವರೆ ಮನೆ ಮಗನನ್ನು ಕೊಲೆ ಮಾಡಿದ್ದಾರೆ. ತಂದೆ-ತಾಯಿ ಮತ್ತು ಮೊಮ್ಮಗ ಸೇರಿ ರಾಮಮೂರ್ತಿ (46) ಅವರನ್ನು ಕೊಲೆ ಮಾಡಿದ್ದಾರೆ.
ರಾಮಮೂರ್ತಿ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ಅಲ್ಲದೇ ಕುಟುಂಬದವರೊಂದಿಗೆ ಸದಾ ಜಗಳ ಕಾಯುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಬೇಸತ್ತ ಕುಟುಂಬಸ್ಥರು ಕೊಲೆ ಮಾಡಿದ್ದಾರೆ.(ಬೆಂಗಳೂರಿನಲ್ಲಿ ಒಂಟಿ ವೃದ್ಧೆ ಉಸಿರುಗಟ್ಟಿಸಿ ಕೊಲೆ)
ರಾಮಮೂರ್ತಿಯನ್ನು ತಂದೆ ನಾರಾಯಣರಾವ್, ತಾಯಿ ಇಂದ್ರಮ್ಮ ಮತ್ತು ಪುತ್ರ ರಾಘವೇಂದ್ರನೇ ಹತ್ಯೆ ಮಾಡಿದ್ದಾರೆ. ಎಂದಿನಂತೆ ಕುಡಿದು ಬಂದ ರಾಮಮೂರ್ತಿ ತಂದೆಯೊಂದಿಗೆ ಜಗಳಕ್ಕೆ ನಿಂತಿದ್ದಾನೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ದೊಣ್ಣೆಯಿಂದ ಹೊಡೆದು ರಾಮಮೂರ್ತಿ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ.(ರಾಜಾಜಿನಗರದ ರಾಮಮಂದಿರ ಬಳಿ ಜೋಡಿ ಕೊಲೆ)
ಸುಮಾರು ದಿನಗಳಿಂದ ದಿನಂಪ್ರತಿ ಕುಡಿದು ಮನೆಗೆ ಆಗಮಿಸುತ್ತಿದ್ದ ರಾಮಮೂರ್ತಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆಯುತ್ತಿದ್ದ. ಅಲ್ಲದೇ ಹಣಕ್ಕಾಗಿ ಕುಟುಂಬಸ್ಥರನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಕುಟುಂಬಸ್ಥರೇ ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.