ಬೈಕ್ ವ್ಹೀಲಿಂಗ್ ಮಾಡುತ್ತ ಕಾರ್ಗೆ ಗುದ್ದಿದ ಯುವಕ
ಬೆಂಗಳೂರು, ಜ. 12: ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಗೊಂಡಿದ್ದರೂ ಸಂಪೂರ್ಣ ಕಡಿವಾಣ ಸಾಧ್ಯವಾಗಿಲ್ಲ. ಯುವಕನೋರ್ವನ ಬೈಕ್ ವ್ಹೀಲಿಂಗ್ ಹುಚ್ಚಿಗೆ ಕುಟುಂಬವೊಂದು ಸ್ವಲ್ಪದರಲ್ಲಿ ಸಾವಿನಿಂದ ಪಾರಾಗಿದೆ.
ಆಗಿದ್ದೇನು? : ಭಾನುವಾರ ಬೆಳಗ್ಗೆ ಗಿರಿನಗರದ 80 ಅಡಿ ರಸ್ತೆಯ 12ನೇ ಕ್ರಾಸ್ನಲ್ಲಿ ತಿರುವು ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತ ಅತ್ಯಂತ ವೇಗವಾಗಿ ಬಂದ ಸವಾರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಸಂಪೂರ್ಣ ನಜ್ಜುಗುಜ್ಜಾಗಿರುವ ಬೈಕ್ ಅಲ್ಲಿಯೇ ಬಿಟ್ಟು ಸವಾರ ಪಲಾಯನ ಮಾಡಿದ್ದಾನೆ.
ಬೈಕ್ ಸವಾರ ಡಿಕ್ಕಿ ಹೊಡೆದಿದ್ದು ಕಾರಿನ ಹಿಂಬಾಗಿಲಿಗೆ. ಬನಶಂಕರಿ ನಿವಾಸಿ ಬಾಲಕೃಷ್ಣ ಭಟ್, ಅವರ ಪತ್ನಿ ಮತ್ತು ಮಗು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲ ಕಾರಿನ ಮುಂದಿನ ಸೀಟ್ನಲ್ಲಿಯೇ ಕುಳಿತಿದ್ದರಿಂದ ಯಾವುದೇ ಅನಾಹುತ ಸಂಭವಿಸದೆ ಬಚಾವಾಗಿದ್ದಾರೆ. [ಹಳ್ಳಿಯಲ್ಲೂ ಹೆಲ್ಮೆಟ್ ಕಡ್ಡಾಯ]
ಪೊಲೀಸರು ಸ್ಥಳಕ್ಕೆ ಬಂದು ಅಪಘಾತವನ್ನು ಪರಿಶೀಲಿಸಿದ್ದಾರೆ. ಬೈಕ್ ವಶಕ್ಕೆ ತೆಗೆದುಕೊಂಡಿದ್ದು, ನೋಂದಣಿ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಆರೋಪಿಯನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.