ಬಾಲಕಿಯ ನರ್ತಕಿ ಕನಸು ಹೊಸಕಿಹಾಕಿದ ಬಿಎಂಟಿಸಿ
ಬೆಂಗಳೂರು,ಆ.5: ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಂಟೋನ್ಮೆಂಟ್ ರೈಲು ನಿಲ್ದಾಣ ಸಮೀಪ ನಡೆದಿದೆ.
ಒಂಭತ್ತು ವರ್ಷದ ವಿದ್ಯಾರ್ಥಿನಿ ಶುಭಾ ಹರಿಣಿ ಗಂಭೀರ ಗಾಯಗೊಂಡಿದ್ದು ಜೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ.[ಲಾಭದಲ್ಲಿ ಓಡುತ್ತಿದೆ ಬಿಎಂಟಿಸಿ, ಕೆಎಸ್ಆರ್ಟಿಸಿ]
ಪ್ರತಿದಿನ ಶುಭಾ, ತನ್ನ ಅಕ್ಕನೊಂದಿಗೆ ಬಿಎಂಟಿಸಿ ಬಸ್ನಲ್ಲಿ ಶಾಲೆಗೆ ತರೆಳಿ ಮನೆಗೆ ಹಿಂದಿರುಗುತ್ತಿದ್ದಳು. ಎಂದಿನಿಂತೆ ಇಂದು ಬಿಎಂಟಿಸಿ ಬಸ್ ಹತ್ತುವ ಸಂದರ್ಭದಲ್ಲಿ ಅಕ್ಕ ಮೊದಲು ಹತ್ತಿದ್ದರೆ, ಶುಭಾ ಬಸ್ ಹತ್ತುವಾಗ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಈ ಸಂದರ್ಭದಲ್ಲಿ ಬಸ್ ಚಲಿಸಿದ್ದು, ಶುಭಾಳ ಕಾಲಿನ ಮೇಲೆ ಚಕ್ರ ಹರಿದಿದೆ.
ಕಾಲಿಗೆ ತೀವ್ರ ಹಾನಿಯಾಗಿರುವುದರಿಂದ ಕಾಲುಗಳನ್ನು ಕತ್ತರಿಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ನಾಳೆಗೆ(ಆ.6) ತನ್ನ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕಿದ್ದ ಶುಭಾ ಹರಿಣಿ ಭವಿಷ್ಯದಲ್ಲಿ ಉತ್ತಮ ನೃತ್ಯಗಾರ್ತಿ ಆಗಬೇಕೆಂದು ಕನಸು ಕಂಡಿದ್ದಳು.