ಬೆಂಗಳೂರಿನಲ್ಲಿ ಒಂಟಿ ವೃದ್ಧೆ ಉಸಿರುಗಟ್ಟಿಸಿ ಕೊಲೆ
ಬೆಂಗಳೂರು, ಸೆ. 17 : ಬೆಂಗಳೂರಿನ ಈಜಿಪುರದಲ್ಲಿ ಒಂಟಿ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿಸುರುವ ಘಟನೆ ನಡೆಸಿದೆ. ವಿವೇಕನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದವರನ್ನು
ಈಜಿಪುರದ
ಮನೆಯೊಂದರಲ್ಲಿ
ಒಂಟಿಯಾಗಿ
ವಾಸಿಸುತ್ತಿದ್ದ
ಮೈಲಾವತಿ
(60)
ಎಂದು
ಗುರುತಿಸಲಾಗಿದೆ.
ಕೈ
ಕಾಲು
ಕಟ್ಟಿ
ಹಾಕಿ,
ಉಸಿರುಗಟ್ಟಿಸಿ
ಮೈಲಾವತಿ
ಕೊಲೆ
ಮಾಡಿರುವ
ದುಷ್ಕರ್ಮಿಗಳು
ನಂತರ
ಮನೆಯಲ್ಲಿದ್ದ
ಹಣ
ಮತ್ತು
ಚಿನ್ನಾಭರಣಗಳನ್ನು
ದೋಚಿ
ಪರಾರಿಯಾಗಿದ್ದಾರೆ.
ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿರುವ ವಿವೇಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿನ ಬೆರಳಚ್ಚು ಮಾದರಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಎಎಪಿ ವಕ್ತಾರೆಗೆ ಕಿರುಕುಳ]
ಗುಂಡಿನ ದಾಳಿಗೆ ಮುಖಂಡ ಬಲಿ : ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇಕ್ಬಾಲ್ ಹಸನ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಕ್ಬಾಲ್ ಜೊತೆಗಿದ್ದ ಮತ್ತೊಬ್ಬರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಮಧ್ಯಾಹ್ನ ಹೋಟೆಲ್ನಿಂದ ಊಟ ಮುಗಿಸಿ ಹೊರಬರುತ್ತಿದ್ದಾಗ ಆಲ್ಟೋ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಕ್ಬಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.