ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎ ಕೃಷ್ಣಪ್ಪ ಆಯ್ಕೆ
ಬೆಂಗಳೂರು, ಸೆ.11: 'ನಮ್ಮಲ್ಲಿ ನಾಯಕರಿಗೆ ಕೊರತೆ ಇಲ್ಲ. ಎಚ್ ಡಿ ಕುಮಾರಸ್ವಾಮಿ ಅವರು ಎರಡು ಹುದ್ದೆ ನಿಭಾಯಿಸುವ ಒತ್ತಡವಿತ್ತು. ಹೀಗಾಗಿ ಅವರ ರಾಜೀನಾಮೆ ಅಂಗೀಕರಿಸಿದ್ದೇವೆ. ಎ. ಕೃಷ್ಣಪ್ಪ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ' ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಘೋಷಿಸಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮಾತನಾಡಿದ ಎ.ಕೃಷ್ಣಪ್ಪ ಅವರು, 'ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಈ ಮೂಲಕ ಹಿಂದುಳಿದ ಜನಾಂಗಕ್ಕೆ ಮಾನ್ಯತೆ ನೀಡಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮಾರ್ಗದರ್ಶನ ಪಡೆದು ಪಕ್ಷವನ್ನು ಮುನ್ನಡೆಸುತ್ತೇನೆ. ಪಕ್ಷದ ಸಂಘಟನೆ ನನ್ನ ಮೊದಲ ಆದ್ಯತೆ. ಕಾಂಗ್ರೆಸ್ ಹುಳುಕನ್ನು ಎತ್ತಿ ತೋರಿಸುತ್ತೇನೆ' ಎಂದಿದ್ದಾರೆ.
ನಗರದ
ಖಾಸಗಿ
ಹೋಟೆಲ್
ನಲ್ಲಿ
ನಡೆದ
ಜೆಡಿಎಸ್
ಕೋರ್
ಕಮಿಟಿ
ಸಭೆ
ಬುಧವಾರ
ರಾತ್ರಿ
7
ಗಂಟೆ
ಸುಮಾರಿಗೆ
ಮುಕ್ತಾಯಗೊಂಡಿದೆ.
ಕೋರ್
ಕಮಿಟಿಗೆ
ಆಯ್ಕೆಯಾಗುವ
ಸದಸ್ಯರಿಗೆ
ತಲಾ
ಒಂದು
ಲೋಕಸಭಾ
ಕ್ಷೇತ್ರದ
ಜವಾಬ್ದಾರಿಯನ್ನು
ನೀಡುವ
ಬಗ್ಗೆ
ಈ
ಸಭೆಯಲ್ಲಿ
ಅಂತಿಮ
ನಿರ್ಣಯ
ತೆಗೆದುಕೊಳ್ಳಲಾಗಿದೆ.
ಇತ್ತೀಚಿನ ಲೋಕಸಭೆ ಉಪ ಚುನಾವಣೆ ಹಾಗೂ ಈ ಹಿಂದಿನ ಅಸೆಂಬ್ಲಿ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ವೈಫಲ್ಯದ ಕಾರಣದಿಂದ ಪ್ರತಿಪಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನ ಎರಡನ್ನೂ ಹೊಂದಿದ್ದ ಎಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಕುರುಬ ಸಮಾಜದ ಬಂಡೆಪ್ಪ ಕಾಶೆಂಪೂರ, ಯಾದವ ಸಮುದಾಯದ ಎ.ಕೃಷ್ಣಪ್ಪ, ಲಿಂಗಾಯತ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ಅಲ್ಪಸಂಖ್ಯಾತ ಇಕ್ಬಾಲ್ ಅನ್ಸಾರಿ, ಹಿರಿಯ ಮುಖಂಡ ಎಂಸಿ ನಾಣಯ್ಯ ಹೆಸರು ಕೇಳಿ ಬಂದಿತ್ತು. [ರೇಸ್ ನಲ್ಲಿದ್ದವರ ವಿವರ ಇಲ್ಲಿದೆ]
ಪಕ್ಷವನ್ನು ಮುನ್ನಡೆಸುವ ಸಂಘಟನಾ ಚತುರ, ಸಂಪನ್ಮೂಲ ಒಗ್ಗೂಡಿಸುವಿಕೆ ಆಧಾರದ ಮೇಲೆ ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದ ಎ ಕೃಷ್ಣಪ್ಪ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದು ಬಂದಿದೆ.
ಎ ಕೃಷ್ಣಪ್ಪ: ಮಾಜಿ ಮುಖ್ಯಮಂತ್ರಿ ಎಸೆಂ ಕೃಷ್ಣ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಯಾದವ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಕೆ.ಆರ್ ಪುರಂನಲ್ಲಿ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಜೆಡಿಎಸ್ ಟಿಕೆಟ್ ಪಡೆದು ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1985ರಲ್ಲಿ ವರ್ತೂರು ವಿಧಾನಸಭೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.