ಚನ್ನಪಟ್ಟಣದಲ್ಲಿ ಗಳಗಳನೆ ಅತ್ತ ದೊಡ್ಡಗೌಡ್ರ ಸೊಸೆ
ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೂ ಆದ ಅನಿತಾ ಅವರು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಇಳಿವಯಸ್ಸಿನಲ್ಲಿರುವ ತಮ್ಮ ಮಾವ, ಪತಿ ಹಗಲಿರುಳು ನಿದ್ದೆ, ಊಟ ಇಲ್ಲದೆ ಹೋರಾಡುತ್ತಿದ್ದಾರೆ. ಉರಿಬಿಸಿಲ ನಡುವೆಯೂ ಅವರು ಪಡುತ್ತಿರುವ ಕಷ್ಟ ನೋಡಲಾಗುತ್ತಿಲ್ಲ ಎಂದು ಗದ್ಗದಿತರಾದರು.
'ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಪ್ರಚಾರ ಸಂದರ್ಭದಲ್ಲಿ ಕಣ್ಣೀರು ಹಾಕಿದ ದೊಡ್ಡಗೌಡ್ರ ಸೊಸೆ ಅನಿತಾ, ವಯಸ್ಸಾದ ಮಾವನ ಸೇವೆ ಮಾಡಬೇಕಾದ ನಾನು ಅವರಿಂದ ನನ್ನ ಪರ ಮತಯಾಚನೆ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ರಾಜಕಾಕೀಯಕ್ಕೆ ಬಂದು ಏನೂ ಸಾಧನೆ ಮಾಡಬೇಕಿಲ್ಲ.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಹತ್ವಾಕಾಂಕ್ಷೆಯಿಂದ ಅವರೊಂದಿಗೆ ಹೆಜ್ಜೆಹಾಕುತ್ತಿದ್ದೇನೆ' ಎಂದು ಗಳಗಳನೆ ಕಣ್ಣಿರು ಸುರಿಸುತ್ತಲೇ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅನಿತಾ ಮಾತನಾಡಿದರು.
ವರ್ಷದಿಂದ ಮನೆಯನ್ನೇ ಸೇರಿಲ್ಲ: ಮಾವ ಹಾಗೂ ಪತಿ ಹಗಲಿರುಳೆನ್ನದೆ ಪ್ರಚಾರ ಮಾಡುತ್ತಿದ್ದಾರೆ. 1 ವರ್ಷದಿಂದ ಸರಿಯಾಗಿ ಮನೆಯನ್ನೇ ಸೇರಿಲ್ಲ. ಊಟ, ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡುತ್ತಿಲ್ಲ. ಜನತೆ ಹಾಗೂ ರೈತರ ಕ್ಷೇಮಕ್ಕೋಸ್ಕರ ದುಡಿಯುತ್ತಿದ್ದಾರೆ. ಅವರ ಹೋರಾಟ ಸಾರ್ಥಕವಾಗಬೇಕಾದರೆ ಮತದಾರರು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದೂ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.