ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟದಿಂದ ಬಿಜೆಪಿಗೆ ಆನೆ ಬಲ: ಕಾಂಗ್ರೆಸ್ ಟ್ವೀಟ್

By Mahesh
|
Google Oneindia Kannada News

ಬೆಂಗಳೂರು, ಏ.17: ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ನಡೆದಿರುವ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಪ್ರಥಮ ಪ್ರತಿಕ್ರಿಯೆ ಹೊರ ಬಿದ್ದಿದ್ದು ಮಾಜಿ ರಾಜ್ಯ ಸಚಿವ ಅಹ್ಮದ್ ಶಕೀಲ್ ಅವರ ಟ್ವೀಟ್ ಕುತೂಹಲಕಾರಿಯಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ಬಳಿ ಸ್ಫೋಟಗೊಂಡಿರುವುದರ ಹಿಂದೆ ಉಗ್ರರ ಕೈವಾಡ ಇರುವುದು ನಿಜವಾದರೆ ಇದು ಬಿಜೆಪಿಗೆ ರಾಜಕೀಯವಾಗಿ ಶುಭದಾಯಕವಾಗಿ ಮುಂಬರುವ ಅಸೆಂಬ್ಲಿ ಎಲೆಕ್ಷನ್ ಗೆ ಸಿಂಪಥಿ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಪೂರ್ಣ ಪಾಠ ಕೆಳಗೆ ನೋಡಿ

ಸ್ಫೋಟ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ತನಿಖೆ ನಡೆಸಬೇಕು. ಇದು ಮಾಮೂಲಿ ಪ್ರಕರಣವಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Bangalore blast: Police don’t rule out foul play

ಯಾರೀತ ಶಕೀಲ್:
ಯುಪಿಎ ಸರ್ಕಾರದ ಮಾಜಿ ರಾಜ್ಯ ಸಚಿವ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶಾಶ್ವತ ಅಹ್ವಾನಿತ, ಪಶ್ಚಿಮ ಬಂಗಾಳ, ಜಾರ್ಖಂಡ್, ಅಂಡಮಾನ್ ನಿಕೋಬಾರ್, ದರ್ಬಾಂಗ, ಪಾಟ್ನ ಗಳ ಉಸ್ತುವಾರಿ ವಹಿಸಿಕೊಂಡಿರುವ ಪ್ರಭಾವಿ ಮುಖಂಡ. ಈಗ ಅಸಂಬದ್ಧ ಟ್ವೀಟ್ ಮೂಲಕ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ ಟ್ರೆಂಡಿಂಗ್ ನಲ್ಲಿ ಟಾಪ್ ಸ್ಥಾನಕ್ಕೇರಿದ್ದಾರೆ.

ಸೂಚನೆ: ಟ್ವಿಟರ್ ಮೂಲಕ ಜನತೆ ಆತಂಕ ಅಷ್ಟೇ ಅಲ್ಲದೆ, ತಕ್ಷಣದ ಮಾಹಿತಿ, ಅಲರ್ಟ್ ನೀಡಲು ಸಹಕಾರಿಯಾಗಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸ್ಫೋಟದಿಂದ ಗಾಯಗೊಂಡವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದೆ. 23343791, 23341771 ಕರೆ ಮಾಡಿ ಟ್ವೀಟ್ ಟ್ಯಾಗ್ ಫಾಲೋ ಮಾಡಿ #ICSL

ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಗಳೂರು ಸ್ಫೋಟದ ಬಗ್ಗೆ ತೀವ್ರ ಆತಂಕ, ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತವಾಗಿದೆ. ಮಲ್ಲೇಶ್ವರಂನ ಜನತೆ ಸಹಜವಾಗಿ ಆತಂಕಕ್ಕೆ ಈಡಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ.

English summary
If the blast near BJP's office in Banglore is a terror attack,it will certainly help the BJP politically on the eve of election. tweets Ex-MoS Govt of India&National Spokesperson Congress.Presently Permanent Invitee CWC&Incharge West Bengal Shakeel Ahmed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X