ಬರ ಅಧ್ಯಯನ ಈಗ ಎಚ್ಡಿಕೆ ಜೆಡಿಎಸ್ ಸರದಿ
ರಾಜ್ಯದ 123 ಬರಪೀಡಿತ ತಾಲೂಕುಗಳು ಹಾಗೂ ಇತರೆ ಜಿಲ್ಲೆಗಳಲ್ಲಿ ವಾಸ್ತವ ಪರಿಸ್ಥಿತಿ ಅಧ್ಯಯನ ಪ್ರವಾಸ ಕೈಗೊಳ್ಳಲು ಶಾಸಕರ ನೇತೃತ್ವದಲ್ಲಿ 26 ತಂಡಗಳನ್ನು ರಚಿಸಲಾಗಿದೆ. ಏ. 16ರಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳೂರು, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಬರ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ತಂಡ ಭೇಟಿ ನೀಡಲಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಿವೆ. ಅಲ್ಲದೆ, ಪಕ್ಷದ ಮುಖಂಡರು ಭೇಟಿ ನೀಡಲಿರುವ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಹಾಗೂ ಛಾಯಾಚಿತ್ರಗಳನ್ನು ತೆಗೆಯಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
10
ದಿನಗಳಲ್ಲಿ
ಸಂಪೂರ್ಣ
ಮಾಹಿತಿಯನ್ನು
ಸಂಗ್ರಹಿಸಿದ
ನಂತರ,
ಜೆಡಿಎಸ್
ರಾಷ್ಟ್ರೀಯ
ಅಧ್ಯಕ್ಷ
ಎಚ್.ಡಿ.ದೇವೇ
ಗೌಡ
ನೇತೃತ್ವದ
ನಿಯೋಗವು
ಪ್ರಧಾನ
ಮಂತ್ರಿ
ಹಾಗೂ
ಕೇಂದ್ರ
ಹಣಕಾಸು
ಸಚಿವರನ್ನು
ಭೇಟಿ
ಮಾಡಿ
ವರದಿಯನ್ನು
ಸಲ್ಲಿಸಿ,
ಹೆಚ್ಚಿನ
ನೆರವು
ಒದಗಿಸುವಂತೆ
ಕೋರಲಾಗುವುದು
ಎಂದು
ಹೇಳಿದರು.
ಅದರೆ, ಕುಮಾರಸ್ವಾಮಿ ಅಧ್ಯಯನ ತಂಡಾ ಜೊತೆಗೆ ಹೋಗುತ್ತಾರೋ ಅಥವಾ ವರದಿ ಬಂದ ನಂತರ ಸಿಎಂ ಸದಾನಂದ ಗೌಡರು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಮಂಡಿಸುತ್ತಾರೋ ಕಾದು ನೋಡಬೇಕಿದೆ.