ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುತ್ತೂರಿನಿಂದ ಬೆಂಗಳೂರಿಗೆ ಸ್ಲೀಪರ್ ಕೋಚ್ ಬಸ್
ಸ್ಲೀಪರ್ ಕೋಚ್ ಬಸ್ಸು ಪುತ್ತೂರಿನಿಂದ ರಾತ್ರಿ 9:50ಕ್ಕೆ ಹೊರಟು ಉಪ್ಪಿನಂಗಡಿ ನೆಲ್ಯಾಡಿ-ಹಾಸನ ಮಾರ್ಗವಾಗಿ ಮರುದಿನ ಬೆಳಗ್ಗೆ 5:30 ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9:50ಕ್ಕೆ ಬಿಡುವ ಬಸ್ ಮರುದಿನ ಬೆಳಗ್ಗೆ 5:30ಕ್ಕೆ ಪುತ್ತೂರು ತಲುಪಲಿದೆ.
ಸೋಮವಾರ(ಏ.9) ದಂದು ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್ ನೂತನ ಬಸ್ಸಿಗೆ ಪುತ್ತೂರು ಬಸ್ಸು ನಿಲ್ದಾಣದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕಿ ಮಲ್ಲಿಕಾ ಪ್ರಸಾದ್, ತಾಪಂ ಅಧ್ಯಕ್ಷ ಡಿ.ಶಂಭು ಭಟ್, ಪುರಸಭಾಧ್ಯಕ್ಷೆ ಕಮಲಾ ಆನಂದ್, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್, ಮುಂತಾದವರು ಉಪಸ್ಥಿತರಿದ್ದರು.
ಪುತ್ತೂರು ಜನರ ಬಹುದಿನದ ಬೇಡಿಕೆಯಂತೆ ಸ್ಲೀಪರ್ ಕೋಚ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ,ಬೆಂಗಳೂರು ಮಂಗಳೂರು ರಸ್ತೆ ದುರಸ್ತಿಯ ನಡುವೆ ಸುಖನಿದ್ರೆ ಪ್ರಯಾಣ ಸಾಧ್ಯವೇ? ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
Comments
ಕೆಎಸ್ ಆರ್ ಟಿಸಿ ಪುತ್ತೂರು ಜಿಲ್ಲಾಸುದ್ದಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ puttur ksrtc district news bangalore national highway
English summary
KSRTC is running a sleeper coach bus from Puttur to Bangalore via Uppinangady, Nelyadi, Hassan-Bangalore. MLA Mallika Prasad, Zilla Panchayat president Shailaja bhat flagged new bus service.
Story first published: Tuesday, April 10, 2012, 8:39 [IST]