ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏ.17ರ ತನಕ ಗಾಲಿ ರೆಡ್ಡಿಗೆ ಶುಭ ಸುದ್ದಿ ಸಿಗಲ್ಲ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಆಪ್ತ ಸಹಾಯಕ ಮೆಹಫುಜ್ ಅಲಿ ಖಾನ್ ಇಬ್ಬರಿಗೂ ಏ.17ರ ತನಕ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ ಎಎಂಸಿ ಹಾಗೂ ಡೆಕ್ಕನ್ ಗಣಿ ಕಪನಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.
ಹೆಚ್ಚುವರಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಹಾಗೂ ಸಿಬಿಐ ವಿಶೇಷ ನ್ಯಾ ಬಿಎಂ ಅಂಗಡಿ ಅವರು ಗಾಲಿ ರೆಡ್ಡಿ ಹಾಗೂ ಅಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಅತ್ತ ಓಬಳಾಪುರಂ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆಂಧ್ರಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಸೋಮವಾರ(ಏ.2) ನಿರಾಕರಿಸಿದೆ.
ಹೈದರಾಬಾದ್ ಕೋರ್ಟ್ ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ನಾಲ್ಕು ಬಾರಿ ವಜಾಗೊಂಡಿರುವುದನ್ನು ಇಲ್ಲಿ ಸ್ಮರಿಸಹುದು.
Comments
ಅಕ್ರಮ ಗಣಿಗಾರಿಕೆ ಸಿಬಿಐ ಜನಾರ್ದನ ರೆಡ್ಡಿ ಐಎಎಸ್ ಶ್ರೀಲಕ್ಷ್ಮಿ ಜಾಮೀನು illegal mining cbi janardhana reddy ias srilakshmi
English summary
Bangalore CBI court again rejected bail plea by former minister Gali Janardhana reddy and his aide Mehfuz Ali Khan. Judicial custody of duo extended till Apr.17. Gali Reddy is in Parappana Agrahara Jail facing charges in AMC and Deccan mining company case.
Story first published: Sunday, April 8, 2012, 9:56 [IST]