ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ರಾಜೀವ್ ಸೇರಿ ರಾಜ್ಯಸಭೆಗೆ ನಾಲ್ವರು ಆಯ್ಕೆ

By Mahesh
|
Google Oneindia Kannada News

Rajeev Chandrashekar
ಬೆಂಗಳೂರು, ಮಾ.24: ಉದ್ಯಮಿ, ಪಕ್ಷೇತರ ಅಭ್ಯರ್ಥಿ ರಾಜೀವ್ ಚಂದ್ರಶೇಖರ್, ಬಿಜೆಪಿಯ ಬಸವರಾಜ ಸೇಡಂ, ಆರ್ ರಾಮಕೃಷ್ಣ ಹಾಗೂ ಕಾಂಗ್ರೆಸ್ ನ ಕೆ ರೆಹಮಾನ್ ಖಾನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಪಿ ಓಂಪ್ರಕಾಶ್ ಪ್ರಕಟಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಗೆ ಸೆಡ್ದು ಹೊಡೆಯಲು ಹೋಗಿ ಮುಖಭಂಗ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಿಜೆ ಪುಟ್ಟಸ್ವಾಮಿ, ನಾಮಪತ್ರ ಹಿಂಪಡೆದಿದ್ದಾರೆ.

ನಾಲ್ಕು ಜನರ ಪೈಕಿ ರೆಹಮಾನ್‌ಖಾನ್ ಮತ್ತು ರಾಜೀವ್ ಚಂದ್ರಶೇಖರ್ ಪುನರಾಯ್ಕೆಯಾಗಿದ್ದಾರೆ. ಖಾನ್ ಅವರು ನಾಲ್ಕನೇ ಬಾರಿಗೆ ಹಾಗೂ ರಾಜೀವ್ ಅವರು 2ನೇ ಅವಧಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ. ಇವರ ಅಧಿಕಾರ ಅವಧಿ ಏಪ್ರಿಲ್ 2ರಿಂದ 6 ವರ್ಷಗಳ ಕಾಲ ಇರುತ್ತದೆ.

ಆಯ್ಕೆ ಕುರಿತ ಪ್ರಮಾಣ ಪತ್ರ ಸ್ವೀಕರಿಸಿ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿಯೂ ಆದ ತಮಿಳುನಾಡು ಮೂಲದ ಆರ್.ರಾಮಕೃಷ್ಣ ಅವರು 'ಇನ್ನು ಮುಂದೆ ಕರ್ನಾಟಕ ನನ್ನ ಎರಡನೇ ಮನೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ' ಎಂದಿದ್ದಾರೆ.

English summary
Two candidates from Karnataka's ruling Bharatiya Janata Party (BJP) and one from the opposition Congress and Independent candidate Rajeev Chandrashekar with JDS help were declared elected unopposed to the Rajya Sabha said legislature's returning officer P. Omprakash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X