ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಜೆಟ್ : ಊಹಾಪೋಹಗಳನ್ನು ಗಾಳಿಗೆ ತೂರಿದ ಕೆಎಸ್
ಬಜೆಟ್ಟನ್ನು ಸದಾನಂದ ಗೌಡರು ಮಂಡಿಸುತ್ತಾರೋ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಡಿಸುತ್ತಾರೋ ಎಂಬ ಕುರಿತು ಸಾಕಷ್ಟು ಗಾಳಿಸುದ್ದಿಗಳು ಹರಿದಾಡುತ್ತಿದ್ದವು. ಯಡಿಯೂರಪ್ಪನವರನ್ನು ಗದ್ದುಗೆಯ ಮೇಲೆ ಕೂಡಿಸಲು ಹೈಕಮಾಂಡ್ ಹಸಿರು ನಿಶಾನೆ ನೀಡಿದೆ ಎಂಬ ಸುದ್ದಿಯೂ ಹಬ್ಬಿತ್ತು. ಈ ಊಹಾಪೋಹಗಳನ್ನೇ ಗಾಳಿಗೆ ತೂರಿದ ಈಶ್ವರಪ್ಪ, ಗಾಳಿ ಸುದ್ದಿ ಹರಡುತ್ತಿದ್ದ ಯಡಿಯೂರಪ್ಪ ಬೆಂಬಲಿಗರ ಬಾಯಿಯನ್ನು ಮುಚ್ಚಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡುತ್ತಿದ್ದ ಕೇಂದ್ರದ ಮಾಜಿ ಸಚಿವ ಮತ್ತು ಯಡಿಯೂರಪ್ಪ ಬೆಂಬಲಿಗ ಧನಂಜಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ಇವರು ಯಾವ ಘನಂದಾರಿ ಮನುಷ್ಯ ಅಂತ ಅವರ ಮಾತನ್ನು ಕೇಳಬೇಕು. ಅವರೇನು ಬಿಜೆಪಿ ವಕ್ತಾರರಲ್ಲ ಎಂದು ತಿರುಗೇಟು ನೀಡಿದ್ದಾರೆ. ಡಿವಿಎಸ್ ಬಜೆಟ್ ಮಂಡಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ.
Comments
ಕರ್ನಾಟಕ ಬಜೆಟ್ ಕೆಎಸ್ ಈಶ್ವರಪ್ಪ ಸದಾನಂದ ಗೌಡ ಯಡಿಯೂರಪ್ಪ ಜಿಲ್ಲಾಸುದ್ದಿ karnataka budget ks eshwarappa sadananda gowda yediyurappa
English summary
BJP state president KS Eshwarappa has put an end to all the rumors about who will present Karnataka Budget on March 21, DV Sadananda Gowda or BS Yeddyurappa? He said DVS, who is also finance minister would present the budget undoubtedly.
Story first published: Saturday, March 17, 2012, 12:59 [IST]