•  

ಯಡಿಯೂರಪ್ಪ ಮುಂದಿನ ಹೆಜ್ಜೆ ಗೋವಾದಲ್ಲಿ?

ಶುಕ್ರವಾರ, ಫೆಬ್ರವರಿ 24, 2012, 11:34 [IST]
karnataka-bjp-crisis-bsy-to-give-a-shock-gadkari
ಬೆಂಗಳೂರು, ಫೆ. 24: ಡಿವಿ ಸದಾನಂದಗೌಡರನ್ನು ಕಿತ್ತೊಗೆದು ತಮ್ಮನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ತಮ್ಮ ಅಗ್ರ-ಉಗ್ರ ಬೇಡಿಕೆಯನ್ನು ನಿತಿನ್ ಗಡ್ಕರಿ ನೇತೃತ್ವದ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿರುವುದಕ್ಕೆ ಸಡ್ಡು ಹೊಡೆಯಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಸಿವೆ.
  Read:  In English 
ಯಡಿಯೂರಪ್ಪ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂಬುದನ್ನು ಅರಿತ ಯಡಿಯೂರಪ್ಪ ಆಪ್ತರು ಇದೀಗ ಖಾಸಗಿ ರೆಸಾರ್ಟಿನಲ್ಲಿ ನಡೆಯುತ್ತಿರುವ ಚಿಂತನ ಮಂಥನ ಸಭೆಯಲ್ಲಿ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದಾರೆ. ಯಡ್ಡಿ ಬಣದ ಶಾಸಕರ ಮನದಲ್ಲಿ ಉದ್ವಿಗ್ನತೆ ಮೂಡಿದ್ದು, ಗಡ್ಕರಿ ಭಾಷಣ ಮುಗಿಯುತ್ತಿದ್ದಂತೆ ತಮ್ಮ ನಾಯಕ ನೀಡುವ ಸೂಚನೆಗಾಗಿ ಕಾದುಕುಳಿತಿದ್ದಾರೆ.

ಬಹುಶಃ ಯಡಿಯೂರಪ್ಪ ಅವರು ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆ ಇದೆ. ನಂತರ ತಮ್ಮ ಬೆಂಬಲಿಗ ಶಾಸಕರೊಂದಿಗೆ ಗೋವಾದಲ್ಲಿ ಕುಂಕಳ್ಳಿ ರೆಸಾರ್ಟಿಗೆ ತೆರಳಿ ಪ್ರತ್ಯೇಕ ಸಭೆ ನಡೆಸುವುದಕ್ಕೆ ನಿರ್ಧರಿಸಿದ್ದಾರೆ. 

ಯಡಿಯೂರಪ್ಪ, ಈ ಹಿಂದೆ ತಾವೇ ನೀಡಿದ್ದ ಫೆ. 27ರ ಡೆಡ್ ಲೈನ್ ವರೆಗೂ ಕಾಯುವ ಸಹನೆ ಕಳೆದುಕೊಂಡಿರುವಂತೆ ಕಾಣುತ್ತಿದೆ. ಇಂದೇ ರಾಜ್ಯ ನಾಯಕತ್ವ ವಿಷಯ ಫೈಸಲಾಗಬೇಕು ಎಂದು ಮತ್ತೆ ಹಠಕ್ಕೆ ಬಿದ್ದಿರುವಂತಿದೆ. ಇದನ್ನು ಸಾಧಿಸುವುದಕ್ಕಾಗಿ ಒತ್ತಡ ತಂತ್ರಕ್ಕೆ ಮೊರೆಹೋಗಿದ್ದು, ಗಡ್ಕರಿ ದಿಢೀರನೆ ದಿಲ್ಲಿ ವಿಮಾನ ಹತ್ತುವುದಕ್ಕೂ ಮೊದಲೇ ಅವರಿಗೆ ಆಘಾತಕಾರಿ ಸುದ್ದಿ ನೀಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

User Comments
Shekhar 24 Feb 2012 04:34 pm
ಯಡ್ಡಿಯವರೇ, ನಿಮ್ಮ ಹೋರಾಟಕ್ಕೆ ನಮ್ಮೆ ಬೆಂಬಲ ಇದೆ, ದ್ಯರ್ಯವಾಗಿ ಮುನ್ನುಗ್ಗಿ... ದೇವರು ಒಳ್ಳೆಯಧು ಮಾಡಲಿ...
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article