
ಕನಕಪುರ, ಫೆ.16: ಅರಣ್ಯ ಸಚಿವ ಸಿಪಿ ಯೋಗೇಶ್ವರ್ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ನಾನಾಗಲಿ, ನನ್ನ ಸಹೋದರನಾಗಲಿ ಯಾವುದೇ ಅಕ್ರಮ ವ್ಯವಹಾರದಲ್ಲಿ ತೊಡಗಿಲ್ಲ. ಬೇಕಾದರೆ ಸಿಬಿಐ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಒನ್ ಇಂಡಿಯಾ ಕನ್ನಡಕ್ಕೆ ಡಿಕೆ ಶಿವಕುಮಾರ್ ಅವರು ಕಳಿಸುವ ಸ್ಪಷ್ಟನೆ ಈ ಕೆಳಗಿನಂತಿದೆ:
* ನಾನಾಗಲೀ ನನ್ನ ಸಹೋದರ ಡಿ.ಕೆ. ಸುರೇಶ್ ಆಗಲಿ ಕಾನೂನು ಬಾಹೀರವಾಗಿ ಯಾವುದೇ ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿಲ್ಲ.
* ಸಚಿವ ಯೋಗೇಶ್ವರ್ ಅವರಿಗೆ ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಮಾಡದಂತೆ ನಾನಾಗಲೀ ನನ್ನ ಬೆಂಬಲಿಗರಾಗಲೀ ಯಾವುದೇ ಬೆದರಿಕೆ ಹಾಕಿಲ್ಲ.
* ಬೆದರಿಕೆ ಹಾಕಿದ್ದೇನೆ ಎಂಬ ಸಚಿವರ ಆರೋಪ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾದದ್ದು. ಅವರ ಬಳಿ ಯಾವುದಾದರೂ ದಾಖಲೆಗಳಿದ್ದರೆ ಅಥವಾ ಮಾತುಕತೆ ನಡೆಸಿದ ವಿವರಗಳಿದ್ದರೆ ಅದನ್ನು ಬಹಿರಂಗ ಪಡಿಸಲಿ ಅಥವಾ ಪೊಲೀಸರಿಗೆ ದೂರು ನೀಡಲಿ.
* ನನ್ನ ಕ್ಷೇತ್ರದಲ್ಲಿ ಡಿ.ಕೆ.ಎಸ್. ಛಾರಿಟಬಲ್ ಟ್ರಸ್ಟ್ ಹಲವು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿದ್ದು, ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಪಕ್ಷ ಭೇದವಿಲ್ಲದೆ ಗುರುತಿಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ, ಪಾರದರ್ಶಕತೆಯಿಂದ ಮಾಡುತ್ತಾ ಬಂದಿದೆ.
* ಭ್ರಷ್ಟಾಚಾರದ ಲವಲೇಶ ಆರೋಪವು ಬರದಂತೆ ಟ್ರಸ್ಟ್ ಮಾಡುತ್ತಿರುವ ಕೆಲಸವನ್ನು ನನ್ನ ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ.
* ನಿವೇಶನ ಹಂಚುವ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚನೆ ಎಸಗಿದ ಆರೋಪ ಹೊತ್ತು ಯೋಗೇಶ್ವರ್ ಅವರು ಪೊಲೀಸರಿಂದ ಛಾರ್ಜ ಷೀಟ್ ಹಾಕಿಸಿಕೊಂಡಿದ್ದಾರೆ.
* ಸಚಿವರಾದ ನಂತರ ಜಲ್ಲಿ ಕ್ರಷರ್ಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿ ಕ್ರಷರ್ ಮಾಲೀಕರಿಂದ 75 ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಕಾಂಗ್ರೆಸ್ ನಾಯಕ ಸಿ,ಎಂ.ಲಿಂಗಪ್ಪ ಬಹಿರಂಗ ಆರೋಪ ಮಾಡಿದ್ದರು.
* ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ನಾನು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಕ್ಕೆ ಪ್ರತಿಕಾರವಾಗಿ ಶ್ರೀ ಯೋಗೇಶ್ವರ್ ನನ್ನ ವಿರುದ್ದ ಸುಳ್ಳು ಆರೋಪ ಹೊರೆಸಲು ಯತ್ನಿಸುತ್ತಿದ್ದಾರೆ. ಇದರ ಬದಲು ಅವರು ಸ್ವಯಂ ಆರೋಪ ಮುಕ್ತರಾಗಿ ಹೊರಗೆ ಬರಲಿ ಎಂದು ಆಶಿಸುತ್ತೇನೆ.
- ಡಿಕೆ ಶಿವಕುಮಾರ, ಕನಕಪುರ
ಡಿಕೆಶಿ ಅಕ್ರಮದ ಬಗ್ಗೆ ಯೋಗೇಶ್ವರ್ ಒದಗಿಸುವ ದಾಖಲೆಗಳು ಯಾವುದು..? ಮುಂದೆ ಓದಿ...
ಒನ್ ಇಂಡಿಯಾ ಕನ್ನಡಕ್ಕೆ ಡಿಕೆ ಶಿವಕುಮಾರ್ ಅವರು ಕಳಿಸುವ ಸ್ಪಷ್ಟನೆ ಈ ಕೆಳಗಿನಂತಿದೆ:
* ನಾನಾಗಲೀ ನನ್ನ ಸಹೋದರ ಡಿ.ಕೆ. ಸುರೇಶ್ ಆಗಲಿ ಕಾನೂನು ಬಾಹೀರವಾಗಿ ಯಾವುದೇ ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿಲ್ಲ.
* ಸಚಿವ ಯೋಗೇಶ್ವರ್ ಅವರಿಗೆ ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಮಾಡದಂತೆ ನಾನಾಗಲೀ ನನ್ನ ಬೆಂಬಲಿಗರಾಗಲೀ ಯಾವುದೇ ಬೆದರಿಕೆ ಹಾಕಿಲ್ಲ.
* ಬೆದರಿಕೆ ಹಾಕಿದ್ದೇನೆ ಎಂಬ ಸಚಿವರ ಆರೋಪ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾದದ್ದು. ಅವರ ಬಳಿ ಯಾವುದಾದರೂ ದಾಖಲೆಗಳಿದ್ದರೆ ಅಥವಾ ಮಾತುಕತೆ ನಡೆಸಿದ ವಿವರಗಳಿದ್ದರೆ ಅದನ್ನು ಬಹಿರಂಗ ಪಡಿಸಲಿ ಅಥವಾ ಪೊಲೀಸರಿಗೆ ದೂರು ನೀಡಲಿ.
* ನನ್ನ ಕ್ಷೇತ್ರದಲ್ಲಿ ಡಿ.ಕೆ.ಎಸ್. ಛಾರಿಟಬಲ್ ಟ್ರಸ್ಟ್ ಹಲವು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿದ್ದು, ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಪಕ್ಷ ಭೇದವಿಲ್ಲದೆ ಗುರುತಿಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ, ಪಾರದರ್ಶಕತೆಯಿಂದ ಮಾಡುತ್ತಾ ಬಂದಿದೆ.
* ಭ್ರಷ್ಟಾಚಾರದ ಲವಲೇಶ ಆರೋಪವು ಬರದಂತೆ ಟ್ರಸ್ಟ್ ಮಾಡುತ್ತಿರುವ ಕೆಲಸವನ್ನು ನನ್ನ ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ.
* ನಿವೇಶನ ಹಂಚುವ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚನೆ ಎಸಗಿದ ಆರೋಪ ಹೊತ್ತು ಯೋಗೇಶ್ವರ್ ಅವರು ಪೊಲೀಸರಿಂದ ಛಾರ್ಜ ಷೀಟ್ ಹಾಕಿಸಿಕೊಂಡಿದ್ದಾರೆ.
* ಸಚಿವರಾದ ನಂತರ ಜಲ್ಲಿ ಕ್ರಷರ್ಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿ ಕ್ರಷರ್ ಮಾಲೀಕರಿಂದ 75 ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಕಾಂಗ್ರೆಸ್ ನಾಯಕ ಸಿ,ಎಂ.ಲಿಂಗಪ್ಪ ಬಹಿರಂಗ ಆರೋಪ ಮಾಡಿದ್ದರು.
* ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ನಾನು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಕ್ಕೆ ಪ್ರತಿಕಾರವಾಗಿ ಶ್ರೀ ಯೋಗೇಶ್ವರ್ ನನ್ನ ವಿರುದ್ದ ಸುಳ್ಳು ಆರೋಪ ಹೊರೆಸಲು ಯತ್ನಿಸುತ್ತಿದ್ದಾರೆ. ಇದರ ಬದಲು ಅವರು ಸ್ವಯಂ ಆರೋಪ ಮುಕ್ತರಾಗಿ ಹೊರಗೆ ಬರಲಿ ಎಂದು ಆಶಿಸುತ್ತೇನೆ.
- ಡಿಕೆ ಶಿವಕುಮಾರ, ಕನಕಪುರ
ಡಿಕೆಶಿ ಅಕ್ರಮದ ಬಗ್ಗೆ ಯೋಗೇಶ್ವರ್ ಒದಗಿಸುವ ದಾಖಲೆಗಳು ಯಾವುದು..? ಮುಂದೆ ಓದಿ...
















