
ನವದೆಹಲಿ, ಫೆ.9: 'ದೇಗುಲ ಸಮಾನ ವಿಧಾನಸೌಧದಲ್ಲೇ ಬ್ಲೂ ಫಿಲಂ ಎಂಜಾಯ್ ಮಾಡಿದ ಕರ್ನಾಟಕದ ಕುಖ್ಯಾತ ಮೂವರು ಸಚಿವರನ್ನು ಸದನದಿಂದ ಮೊದಲು ಹೊರಹಾಕಿ. ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ' ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಆಗ್ರಹಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗೆಡೆ ಮಾಡಿರುವ ಭ್ರಷ್ಟಾಚಾರ ಆಂದೋಲನದ ನೇತಾರ ಅಣ್ಣಾ ಹಜಾರೆ, 'ನಮ್ಮ ಪ್ರಜಾಪ್ರಭುತ್ವದ ಪವಿತ್ರ ದೇಗುಲಗಳಾದ ಸಂಸತ್ತು ಮತ್ತು ವಿಧಾನಸಭೆಗಳನ್ನು ಅಪವಿತ್ರಗೊಳಿಸುತ್ತಿರುವ ಜನನಾಯಕರು ರಾಜಕೀಯ ಪಕ್ಷಗಳಲ್ಲಿ ಇದ್ದಾರೆ. ದೇಶದ ಭವಿಷ್ಯ ಇಂತಹವರದೇ ಕೈಯಲ್ಲಿದೆ. ರಾಜಕೀಯ ಪಕ್ಷಗಳು ಇಂತಹವರಿಗೇ ಚುನಾವಣೆ ಟಿಕೆಟ್ ನೀಡಲು ನಾಮುಂದುತಾಮುಂದು ಎಂದು ಪೈಪೋಟಿ ನಡೆಸುತ್ತಿವೆ ' ಎಂದು ಗುಡುಗಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗೆಡೆ ಮಾಡಿರುವ ಭ್ರಷ್ಟಾಚಾರ ಆಂದೋಲನದ ನೇತಾರ ಅಣ್ಣಾ ಹಜಾರೆ, 'ನಮ್ಮ ಪ್ರಜಾಪ್ರಭುತ್ವದ ಪವಿತ್ರ ದೇಗುಲಗಳಾದ ಸಂಸತ್ತು ಮತ್ತು ವಿಧಾನಸಭೆಗಳನ್ನು ಅಪವಿತ್ರಗೊಳಿಸುತ್ತಿರುವ ಜನನಾಯಕರು ರಾಜಕೀಯ ಪಕ್ಷಗಳಲ್ಲಿ ಇದ್ದಾರೆ. ದೇಶದ ಭವಿಷ್ಯ ಇಂತಹವರದೇ ಕೈಯಲ್ಲಿದೆ. ರಾಜಕೀಯ ಪಕ್ಷಗಳು ಇಂತಹವರಿಗೇ ಚುನಾವಣೆ ಟಿಕೆಟ್ ನೀಡಲು ನಾಮುಂದುತಾಮುಂದು ಎಂದು ಪೈಪೋಟಿ ನಡೆಸುತ್ತಿವೆ ' ಎಂದು ಗುಡುಗಿದ್ದಾರೆ.
















