•  

ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ

ಶನಿವಾರ, ಫೆಬ್ರವರಿ 4, 2012, 10:51 [IST]
Jayalalithaa
ಚೆನ್ನೈ, ಫೆ 4: ಹೊಸೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಿನಾಥ್ ಕ್ಷೆತ್ರಾಭಿವ್ರುದ್ದಿ ಬಗ್ಗೆ ತಮಿಳುನಾಡು ಅಸೆಂಬ್ಲಿಯಲ್ಲಿ ಕೇಳಿದ ಪ್ರಶ್ತ್ನೆಗೆ ಕನ್ನಡದಲ್ಲೇ ಉತ್ತರಿಸಿ ಮುಖ್ಯಮಂತ್ರಿ ಜಯಲಲಿತಾ ಮಾತೃ ಭಾಷೆಯ ಮೇಲಿನ ತನ್ನ ಪ್ರೀತಿ ತೋರಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ನಡೆಯ ಬೇಕಾಗಿರುವ ಅಭಿವೃದ್ದಿ ಕೆಲಸ ಮತ್ತು ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲೇ ಶಿಕ್ಷಣ ಒದಗಿಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ಜಯಲಲಿತ, ಕನ್ನಡದಲ್ಲೇ ಉತ್ತರಿಸಿದರು.

ಆಯಾಯ ರಾಜ್ಯಗಳಲ್ಲಿ ಮಾತೃ ಭಾಷೆಯಲ್ಲೇ ಆರನೇ ತರಗತಿಯವರೆಗೆ ಶಿಕ್ಷಣ ನೀಡುವ ವ್ಯವಸ್ಥೆಯಿದೆ. ಹೀಗಾಗಿ ನಿಮ್ಮ ಕೋರಿಕೆಗೆ ಸರಕಾರ ಸಕಾರಾತ್ಮಕವಾಗಿ ನಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಶಾಸಕ ಗೋಪಿನಾಥ್ ಗೆ ಕನ್ನಡದಲ್ಲೇ ಭರವಸೆ ನೀಡಿದ್ದಾರೆ. ಮತ್ತು ಮಾತೃ ಭಾಷೆ ಯಾವುದೇ ಇದ್ದರೂ ತಮಿಳು ಕಲಿಯುವುದು ಕಡ್ಡಾಯ ಎಂದಿದ್ದಾರೆ.
User Comments
chakrapani 16 Mar 2012 04:24 pm
ಜೈ ಜಯಲಲಿತಾ ಅನ್ನಬೇಕು ಎನ್ನಿಸುತ್ತಿದೆ ಯಾಕೆಂದರೆ ಅಸ್ಟು ಸುಲಭವಾಗಿ ತಮಿಳಿನವರು ಕನ್ನಡದಲ್ಲಿ ಮಾತನಾಡುವುದು ಕಷ್ಟ (ಕನ್ನಡ ಬಂದರು) ಅದಕ್ಕಾಗಿ ಮತೊಮ್ಮೆ ಜೈ ಜಯಲಲಿತಾ
Jayadevappa Ballur 11 Feb 2012 07:40 am
ಎಂ.ಎಲ್.ಎ. ಗೋಪಿನಾಥ್ ಅವರ ಪ್ರಯತ್ನ ಸ್ತುತ್ಯರ್ಹ , ನಿಜಕ್ಕೂ ಪ್ರಶಂಸಾರ್ಹ.
praveen 10 Feb 2012 07:35 pm
ಕಂಡಿತ ಒಳ್ಳ್ಹೆ ಪ್ರಯೋಗ ! ಆಗುವುದೆಲ್ಲ ಒಳ್ಳ್ಹೆಯದಕ್ಕೆ
Kiran S 07 Feb 2012 05:57 pm
ಒಂದುಕಾಲತ್ತಿಲ್ ಅಣ್ಣಾಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾರ ಅತ್ಯಾಪ್ತ ಗೆಳತಿಯಾಗಿದ್ದ ಶಶಿಕಲಾರನ್ನು ಬಂಧಿಸಲು ವೇದಿಕೆ ಸಜ್ಜುಗೊಂಡಿದೆ.
ravi12sankar 07 Feb 2012 05:56 pm
ಒಂದುಕಾಲತ್ತಿಲ್ ಅಣ್ಣಾಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾರ ಅತ್ಯಾಪ್ತ ಗೆಳತಿಯಾಗಿದ್ದ ಶಶಿಕಲಾರನ್ನು ಬಂಧಿಸಲು ವೇದಿಕೆ ಸಜ್ಜುಗೊಂಡಿದೆ.
viswanath nk 07 Feb 2012 05:55 pm
ಆಯಾಯ ರಾಜ್ಯಗಳಲ್ಲಿ ಮಾತೃ ಭಾಷೆಯಲ್ಲೇ ಆರನೇ ತರಗತಿಯವರೆಗೆ ಶಿಕ್ಷಣ ನೀಡುವ ವ್ಯವಸ್ಥೆಯಿದೆ. ಹೀಗಾಗಿ ನಿಮ್ಮ ಕೋರಿಕೆಗೆ ಸರಕಾರ ಸಕಾರಾತ್ಮಕವಾಗಿ ನಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಶಾಸಕ ಗೋಪಿನಾಥ್ ಗೆ ಕನ್ನಡದಲ್ಲೇ ಭರವಸೆ ನೀಡಿದ್ದಾರೆ.
Sapna Shree 07 Feb 2012 05:54 pm
ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಿಂದ ವಿಮುಖವಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಬಿಜೆಪಿ ನಾಯಕ ಎಲ್‌ ಕೆ ಆಡ್ವಾಣಿ ಮತ್ತು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿಗೆ ಹೆಚ್ಚಿನ ಮಹತ್ವ ದೊರೆತಿದ್ದು, ರಾಜಕೀಯ ಮಹಾಸಂಕ್ರಮಣದ ಮುನ್ಸೂಚನೆಯೂ ಸಿಕ್ಕಿದೆ.
KasiViswanatham 07 Feb 2012 05:53 pm
ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಿಂದ ವಿಮುಖವಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಬಿಜೆಪಿ ನಾಯಕ ಎಲ್‌ ಕೆ ಆಡ್ವಾಣಿ ಮತ್ತು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಭೇಟಿಯಾಗುವ ಸಾಧ್ಯತೆ ಇದೆ.
Ravi Sankar 07 Feb 2012 05:51 pm
ಹೊಸೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಿನಾಥ್ ಕ್ಷೆತ್ರಾಭಿವ್ರುದ್ದಿ ಬಗ್ಗೆ ತಮಿಳುನಾಡು ಅಸೆಂಬ್ಲಿಯಲ್ಲಿ ಕೇಳಿದ ಪ್ರಶ್ತ್ನೆಗೆ ಕನ್ನಡದಲ್ಲೇ ಉತ್ತರಿಸಿ ಮುಖ್ಯಮಂತ್ರಿ ಜಯಲಲಿತಾ ಮಾತೃ ಭಾಷೆಯ ಮೇಲಿನ ತನ್ನ ಪ್ರೀತಿ ತೋರಿದ್ದಾರೆ.
anant 07 Feb 2012 04:52 pm
abhinandnegalu..
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article