•  

ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು

ಗುರುವಾರ, ಫೆಬ್ರವರಿ 2, 2012, 13:31 [IST]
Four killed as Karnataka ambulance rams bus
ಒಸ್ಮಾನಾಬಾದ್, ಫೆ. 2 : ಸಾವಿಗೀಡಾಗಿದ್ದ ವ್ಯಕ್ತಿಯನ್ನು ಸಾಗಿಸುತ್ತಿದ್ದ ಕರ್ನಾಟಕದ ಆಂಬುಲನ್ಸ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮರಣಕ್ಕೀಡಾದ ಭೀಕರ ಘಟನೆ ಗುರುವಾರ ಬೆಳಗಿನ ಜಾವ ಒಸ್ಮಾನಾಬಾದ್ ಜಿಲ್ಲೆಯ ವಡಗಾಂವ್ ಬಳಿ ನಡೆದಿದೆ.

ಸೊಲ್ಲಾಪುರ-ಒಸ್ಮಾನಾಬಾದ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಆಂಬುಲನ್ಸ್ ಔರಂಗಾಬಾದಿಗೆ ತೆರಳುತ್ತಿತ್ತು. ಅಪಘಾತದಲ್ಲಿ ಆಂಬುಲನ್ಸ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ಸು ಒಸ್ಮಾನಾಬಾದಿನಿಂದ ಸತಾರಾಗೆ ತೆರಳುತ್ತಿತ್ತು. ಈ ಘಟನೆಯಲ್ಲಿ ಬಸ್ಸಲ್ಲಿದ್ದ ಹನ್ನೊಂದಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಒಸ್ಮಾನಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article