•  

ಹೂ ಹಣ್ಣು ಅಂಗಡಿಗಾಗಿ ರವಿ ಬೆಳಗೆರೆ ಸತ್ಯಾಗ್ರಹ

ಬುಧವಾರ, ಜನವರಿ 25, 2012, 13:14 [IST]
Ravi Belagare speaking to the media
ಬೆಂಗಳೂರು, ಜ.25: ಗಾಂಧಿ ಬಜಾರಿನ ಹೂ, ಹಣ್ಣು ತರಕಾರಿ ಅಂಗಡಿಗಳ ಧ್ವಂಸವನ್ನು ಖಂಡಿಸಿ ಪತ್ರಕರ್ತ ರವಿ ಬೆಳೆಗೆರೆ ಅವರು ಬುಧವಾರ (ಜ.25) ಸತ್ಯಾಗ್ರಹ ಆರಂಭಿಸಿದ್ದಾರೆ. ರವಿ ಬೆಳಗೆರೆ ಅವರ ಪುಸ್ತಕದಂಗಡಿ 'ಬೆಳೆಗೆರೆ ಬುಕ್ಸ್ ಅಂಡ್ ಕಾಫಿ' ಹೂ ಹಣ್ಣಿನ ಬೀದಿಯಲ್ಲಿ ಫೆ.5 ರ ಸಂಜೆ 4.30 ಗೆ ಆರಂಭವಾಗಲಿದೆ.

ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿ ಉಳಿಸಿಕೊಂಡಿರುವ ಗಾಂಧಿಬಜಾರು, ಬಸವನಗುಡಿ, ಮಲ್ಲೇಶ್ವರ, ಜಯನಗರ ಭಾಗಗಳಲ್ಲಿ ಈ ರೀತಿ ಅಮಾನುಷ ಕ್ರಮ ಜರುಗಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ.

ಬಿಬಿಎಂಪಿ ಆತುರ ಕ್ರಮ ಕೈಗೊಳ್ಳುವ ಮೊದಲು ಮಾನವೀಯತೆ ದೃಷ್ಟಿಯಿಂದ ಒಮ್ಮೆ ನೋಡಬಹುದಿತ್ತು. ಇಲ್ಲಿರುವ ನನ್ನ ಅಕ್ಕ ತಂಗಿಯರು ಅಣ್ಣ ತಮ್ಮಂದಿರ ನೋವಿಗೆ ನಾನು ಸ್ಪಂದಿಸಲೇ ಬೇಕಾಗಿದೆ ಅದಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ರವಿ ಬೆಳೆಗೆರೆ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿದರು.

ಹಲವಾರು ವರ್ಷಗಳಿಂದ ವ್ಯಾಪಾರ ದೃಷ್ಟಿಯಿಂದ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ಗಾಂಧಿಬಜಾರನ್ನು ಅಪ್ಪಿಕೊಂಡಿರುವ ವ್ಯಾಪಾರಿಗಳ ಕೂಗಿಗೆ ಸ್ಪಂದಿಸದೆ ಬಿಬಿಎಂಪಿ ಅವರು ಅಂಗಡಿ ಮುಂಗಟ್ಟುಗಳನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದ್ದರು.
User Comments
Shiva Kumar Gowda 25 Jan 2012 07:21 pm
ಸತ್ಯಾಗ್ರಹದಲ್ಲಿ ನಾನು ಭಾಗವಯಿಸುಥೆನೆ ಅಣ್ಣ ತಂಗಿಯರೇ ಬನ್ನಿ ಕನ್ನಡ ಸಂಸ್ಕೃತಿ ಉಳಿಸಿಸಾಲು ನೀವು ಭಾಗವಯಿಸಿ ಜಯನಗರ ,ಬಸವನಗುಡಿ ,ಗಾಂದಿಬಾಜಾರ್ , ನಮ್ಮ ಹಿಂದಿನ ಸಂಸ್ಕೃತಿಯನ್ನು ಬಿಮ್ಬಿಸುತ್ಹವೇ ಅಂತ ನಗರಗಳನ್ನು ರಕ್ಸಿಸೋಣ ರಸ್ತೆಯಲ್ಲಿ ತೊಂದರೆಯಾದರೆ ರಸ್ತೆ ಬದಿಗಳಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನು ಬಿ.ಬಿ.m .ಪಿ ವತಿಯಿಂದ ಅಕಿಕೊಡಲ್ಲಿ
Nag 25 Jan 2012 03:20 pm
E Sarakarakke olle kelasa madi gottila. Adara tallakke BBMP Hu Hannu vyaparigalige Market vyavaste yadaru kalpisabeku
Nag 25 Jan 2012 03:06 pm
kelasavu kodalla, footpath nalli vyaparamadi jeevana sagisallu bidalla EEEEEE sarakara. Idarinda tondare iddare, sariyada market vyavaste yadaru madabekallave ?? Nachike kedu BBMP & sarakara . Badavara meele kannu
Arun Kumar 25 Jan 2012 02:35 pm
ರವಿ, ನಿಮ್ಮ ಹೋರಾಟ ಸರಿ ಎಂದು ಒಪ್ಪಿಕೊಂಡರು ಅಲ್ಲಿನ ವ್ಯಾಪಾರಿಗಳಿಗೆ ಇರುವ ಅಹಂಕಾರ ಅತ್ಯಂತ ಖಂಡನೀಯ. ಇವರೆಲ್ಲರೂ ದೇವಲೋಕದಿಂದ ಬಂದವರಂತೆ ಕೊಳ್ಳುವ ನಾವು ಬಿಕ್ಶುಕರಂತೆ ಮಾತನಾಡುವ ಇವರಿಗೆ ಸರಿಯಾದ ಪಾಠ ಸರ್ಕಾರ ಕಲಿಸಿದೆ. ಇನ್ನು ಮುಂದೆ ಇವರು ಸರಿಯಾದ ಮಾನವರಂತೆ ವರ್ತಿಸಿದರೆ ಮಾತ್ರ ಇವರಿಗೆ ಪುನರ್ವಸಿತಿ ಬಗ್ಗೆ ಸರ್ಕಾರ ನಿರ್ಧರಿಸಬೇಕು.. ಇವರು ಇನ್ನು ಮುಂದೆಯಾದರೂ ಅತಿಯಾದ ದುರಾಸೆ ಮತ್ತು ಅಹಂಕಾರ ಬಿಟ್ಟು ವ್ಯಾಪಾರ ಮಾಡಿ ಬದುಕುವರೆಂದು ನಮ್ಮ ಒಂದು ಆಸೆ. ತಾವು ಇವರನ್ನು ಈ ದಿಶೆಯಲ್ಲಿ ನಡೆಸುವರೆಂದು ಆಶಿಸುತ್ತೇವೆ. ನಿಮಗೆ ಹಾರ್ದಿಕ ಶುಭಾಶಯಗಳು!!!
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article