ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾವಣನನ್ನು ಸುಡಲು ನಿರ್ಧರಿಸಿದ ಹಜಾರೆ

|
Google Oneindia Kannada News

Anna Hazare Burn Ravana of corruption
ರಾಲೆಂಗಾವ್, ಅ 67: ಅಣ್ಣಾ ಹಜಾರೆ ರಾವಣನನ್ನು ಇಂದು ಸುಡಲಿದ್ದಾರೆ. ಈ ಮೂಲಕ ವಿಶಿಷ್ಟ ದಸರಾ ಹಬ್ಬವನ್ನು ರಾಲೆಂಗಾವ್ ಸಿದ್ದಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಇದು ಕೂಡ ಭ್ರಷ್ಟಾಚಾರದ ವಿರುದ್ಧ ಸಾಂಕೇತಿಕ ಹೋರಾಟ ಎಂದು ಅವರು ಕರೆದಿದ್ದಾರೆ.

"ಭ್ರಷ್ಟಾಚಾರವೆಂಬ ರಾವಣನನ್ನು ನಾನಿಂದು ಸುಡಲಿದ್ದೇನೆ. ಈ ದಸರಾ ಹಬ್ಬದಲ್ಲಿ ನಾವೆಲ್ಲರು ನಮ್ಮೊಳಗಿರುವ, ನಮ್ಮ ದೇಶದಲ್ಲಿರುವ ಭ್ರಷ್ಟಾಚಾರವೆಂಬ ರಾವಣನನ್ನು ದಹಿಸಿಬಿಡೋಣ" ಎಂದು ಹಜಾರೆ ಹೇಳಿದ್ದಾರೆ.

ಅಣ್ಣಾ ಹಜಾರೆ ಗ್ರಾಮದಲ್ಲಿ ದಸರಾವನ್ನು ಬೃಹತ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಸುಮಾರು ಹತ್ತು ಗಂಟೆಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ನಾಡಿನ ಸಂಸ್ಕೃತಿ, ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಂದಹಾಗೆ ಇಂದು ಸಂಜೆ 5 ಗಂಟೆಗೆ ಅಣ್ಣಾ ಭ್ರಷ್ಟಾಚಾರವೆಂಬ ರಾವಣನ ಪ್ರತಿಕೃತಿ ದಹಿಸಲಿದ್ದಾರೆ.

English summary
Anti-corruption crusader, Anna Hazare in a strong message against corruption said that he would burn the Ravana of corruption on Dussehra to set out as an example of his fight against corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X