ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿನ ಪ್ರಜ್ಞೆ ಕಳೆದುಕೊಂಡ ಸಿಎಂ ಬಿಎಸ್ ವೈ

By Mahesh
|
Google Oneindia Kannada News

Yeddyurappa and Team India
ಬೆಂಗಳೂರು, ಏ.8 : ಕ್ರಿಕೆಟ್ಟಿಗರಿಗೆ ಬಿಡಿಎ ಸೈಟು ನೀಡುವ ವಿಚಾರದಲ್ಲಿ "ನಾನೇನು ಮಾಡ್ಲಿ ನನ್ನ ಆಸೆಗೆ ಕಾನೂನು ಅಡ್ಡಿಯಾಗಿದೆ" ಎನ್ನುವ ಮೂಲಕ ತಮ್ಮ ಅಜ್ಞಾನವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜನತೆ ಮುಂದೆ ಪ್ರದರ್ಶಿಸಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಬಿಡಿಎ ನಿವೇಶನ ನೀಡುವುದಾಗಿ ಹಿಂದು ಮುಂದು ಯೋಚಿಸದೆ ಯಡಿಯೂರಪ್ಪ ಅವರು ಖುಷಿಯಿಂದ ಘೋಷಿಸಿದ್ದರು. ಈಗ ಕಾನೂನು ಕಟ್ಲೆ ಎಂದು ಹೇಳಿ ಸೈಟು ಕೊಡಲ್ಲ ಅದರ ಬದಲಾಗಿ 25 ಲಕ್ಷ ರೂಪಾಯಿ ನಗದು ನೀಡಲಾಗುವುದು ಎಂದಿದ್ದಾರೆ.

ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಿಗೆ ಇನ್ನೂ ನಿವೇಶನ ಹಂಚಲು ಮುಂದಾಗದ ಕರ್ನಾಟಕ ಸರ್ಕಾರ, ಏಕಾಏಕಿ ಕ್ರಿಕೆಟ್ಟಿಗರಿಗೆ ಮಣೆ ಹಾಕಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಯಡಿಯೂರಪ್ಪ ಅವರು ಸ್ವಂತ ಖರ್ಚಿನಿಂದ ಆಟಗಾರರಿಗೆ ನಿವೇಶನ ನೀಡಿದರೆ ಯಾರು ಕೇಳುತ್ತಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದರೂ, ಬಾಯಿಗೆ ಬಂದಂತೆ ಹೇಳಿಕೆ ನೀಡುವ ಮೂಲಕ ತಲೆ ತಗ್ಗಿಸುವಂಥ ಕೆಲಸ ಮಾಡಿಕೊಂಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಒಂದು ಸ್ವಾಯುತ್ತ ಸಂಸ್ಥೆಯಾಗಿರುವುದರಿಂದ ಯಡಿಯೂರಪ್ಪ ಅವರಿಗೆ ಬಿಡಿಎಗೆ ನಿರ್ದೇಶನ ಮಾಡಲು ಯಾವುದೇ ಹಕ್ಕಿಲ್ಲ. ಆದರೆ, ಮನವಿ ಸಲ್ಲಿಸಬಹುದು. ಈಗಾಗಲೇ ಭೂ ಹಗರಣಗಳಲ್ಲಿ ಸಿಲುಕಿರುವ ಯಡಿಯೂರಪ್ಪ ಅವರು ಬಿಡಿಎ ಸೈಟು ನೀಡಿದರೆ ಆರೋಪದಿಂದ ಮುಕ್ತರಾಗುತ್ತಾರೆಯೇ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.

ಅಂತೂ ಕೊನೆಗೆ, ಮುಖಭಂಗ ಅನುಭವಿಸಿರುವ ಯಡಿಯೂರಪ್ಪ 50X80 ಸೈಟು ವಿತರಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಆಟಗಾರರಿಗೆ ನಗದು ಹಣ ನೀಡಿ ಸನ್ಮಾನಿಸುವುದಾಗಿ ಹೇಳಿದ್ದಾರೆ. ಐಪಿಎಲ್ ನಲ್ಲಿ ಬ್ಯುಸಿಯಾಗಿರುವ ಕ್ರಿಕೆಟಿಗರು ಕರ್ನಾಟಕ ಸರ್ಕಾರದ ಬಳಿ ಬರಲು ಕನಿಷ್ಠ 2 ತಿಂಗಳು ಹಿಡಿದರು ಆಶ್ಚರ್ಯವೇನಿಲ್ಲ. ಏನಾದರೂ ಯಡಿಯೂರಪ್ಪ ಅವರು ಮಾತಿನ ಮೇಲೆ ಹಿಡಿತ ತಪ್ಪಬಾರದಿತ್ತು.

English summary
BS Yeddyurappa has again been forced to put his foot in his mouth. The Karnataka Chief Minister has gone back on his declaration to allot BDA sites to all 15 World Cup winning players including coach Gary Kristen. Now he announced that no sites will be given instead Rs 25 lakh cash will be presented.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X