•  

ಓಎಂಸಿ ಗಣಿಗಾರಿಕೆಗೆ ಸುಪ್ರಿಂಕೋರ್ಟ್ ತಡೆ

ಸೋಮವಾರ, ಮಾರ್ಚ್ 22, 2010, 15:20 [IST]
SC stays mining activities by Reddy brothers in Andhra Pradesh
ನವದೆಹಲಿ, ಮಾ. 22 : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕರ್ನಾಟಕ ಸರಕಾರದ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಮಾಲೀಕತ್ವ ಓಬಳಾಪುರಂ ಮೈನಿಂಗ್ ಕಂಪನಿ ನಡೆಸುತ್ತಿರುವ ಗಣಿಗಾರಿಕೆಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದೆ.

ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಾ ಕೆ ಜಿ ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ದೀಪಕ್ ವರ್ಮಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಓಬಳಾಪುರಂ ಮೈನಿಂಗ್ ಕಂಪನಿಯ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರತೀಯ ಸರ್ವೆ ಇಲಾಖೆ ನೇತೃತ್ವದ ಸಮಿತಿ ರಚಿಸಿದ್ದು, ಸಮಗ್ರ ವರದಿ ನೀಡುವಂತೆ ಸೂಚಿಸಿದೆ. ಎರಡು ವಾರದೊಳಗೆ ವರದಿ ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಸಮಿತಿಗೆ ಹೇಳಿದೆ. ಮುಂದಿನ ಆದೇಶ ಹೊರಬೀಳುವವರೆಗೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯ ಹೇಳದೆ.

ಇದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ರೆಡ್ಡಿ ಬ್ರದರ್ಸ್ ಗಳಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿಗೆ ನೋಟಿಸ್ ಜಾರಿ ಮಾಡಿದೆ. ಓಬಳಾಪುರಂ ಮೈನಿಂಗ್ ಕಂಪನಿ ಮೇಲೆ ಗಡಿ ಒತ್ತುವರಿ ಹಾಗೂ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ ಆರೋಪವಿದೆ.

User Comments
ಕನ್ನಡಿಗ 23 Mar 2010 09:58 am
ಈ ರೆಡ್ಡಿ ನನ್ನ ಮಕ್ಕಳನ್ನು ಒದ್ದು ಓಡಿಸಬೇಕು ,ಪುಕ್ಕಟೆ ಸಿಗುತ್ತೆ ಅಂದರೆ ಏನಾದರು ಸಗಣಿ ತಿನ್ನುತ್ತಾರೆ .
ಲೀಲಾಧರ 23 Mar 2010 08:50 am
.... ಅದಕ್ಕೇ ಇರಬೇಕು - ನಾಗರಹೊಳೆ ಬಂಡಿಪುರದ ಕಡೆಗೆ ರೆಡ್ಡಿಗಳು ಕಣ್ಣು ಹಾಕಿರುವುದು!
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article