
ಶಿಮ್ಲಾ, ಮಾ. 10 : ಧರ್ಮದ ಹೆಸರಿನಲ್ಲಿ ಅನಾಚಾರಕ್ಕಿಳಿದಿರುವ ಆಧ್ಯಾತ್ಮಿಕ ಗುರುಗಳನ್ನು ಗಲ್ಲಿಗೇರಿಸಬೇಕು ಎಂದು ಯೋಗಗುರು ಬಾಬಾ ರಾಮದೇವ್ ಒತ್ತಾಯಿಸಿದ್ದಾರೆ.
ಹಿಮಾಚಲ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧಮಾಲ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನಿತ್ಯಾನಂದ ಕಾಮಪುರಾಣ ಒಂದಿಡೀ ಧರ್ಮ ತಲೆತಗ್ಗಿಸುವಂತ ಕೆಲಸವಾಗಿದೆ. ಇಂತಹವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದರು. ಈ ಸಂಬಂಧ ನಾನು ಪ್ರಮುಖ ಧಾರ್ಮಿಕ ಗುರುಗಳ ಜತೆ ಮಾತುಕತೆ ನಡೆಸುತ್ತೇನೆ ಎಂದರು ಹೇಳಿದರು.
ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಇಚ್ಛಾದರಿ ಭೀಮಾನಂದ ಎಂಬುವವನು ಹೈಟೆಕ್ ವೇಶ್ಯಾವಾಟಿಕೆ ನಡೆಸಿ ಸಿಕ್ಕಿ ಬಿದ್ದ ಬೆನ್ನಿಗೆ, ಬೆಂಗಳೂರಿನ ಬಿಡದಿಯಲ್ಲಿ ಮುಖ್ಯ ಆಶ್ರಮ ಹೊಂದಿರುವ ಪರಮಹಂಸ ನಿತ್ಯಾನಂದ ಸ್ವಾಮಿ ತಮಿಳು ನಟಿಯೊಂದಿಗೆ ಅಶ್ಲೀಲ ಭಂಗಿಗಳಲ್ಲಿ ಕಾಣಸಿಕೊಂಡ ವೀಡಿಯೋಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದವು.
ಹಿಮಾಚಲ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧಮಾಲ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನಿತ್ಯಾನಂದ ಕಾಮಪುರಾಣ ಒಂದಿಡೀ ಧರ್ಮ ತಲೆತಗ್ಗಿಸುವಂತ ಕೆಲಸವಾಗಿದೆ. ಇಂತಹವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದರು. ಈ ಸಂಬಂಧ ನಾನು ಪ್ರಮುಖ ಧಾರ್ಮಿಕ ಗುರುಗಳ ಜತೆ ಮಾತುಕತೆ ನಡೆಸುತ್ತೇನೆ ಎಂದರು ಹೇಳಿದರು.
ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಇಚ್ಛಾದರಿ ಭೀಮಾನಂದ ಎಂಬುವವನು ಹೈಟೆಕ್ ವೇಶ್ಯಾವಾಟಿಕೆ ನಡೆಸಿ ಸಿಕ್ಕಿ ಬಿದ್ದ ಬೆನ್ನಿಗೆ, ಬೆಂಗಳೂರಿನ ಬಿಡದಿಯಲ್ಲಿ ಮುಖ್ಯ ಆಶ್ರಮ ಹೊಂದಿರುವ ಪರಮಹಂಸ ನಿತ್ಯಾನಂದ ಸ್ವಾಮಿ ತಮಿಳು ನಟಿಯೊಂದಿಗೆ ಅಶ್ಲೀಲ ಭಂಗಿಗಳಲ್ಲಿ ಕಾಣಸಿಕೊಂಡ ವೀಡಿಯೋಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದವು.























