•  

ವಿಧಾನಸೌಧ ನಿರ್ಮಾತೃ ಹನುಮಂತಯ್ಯಗೆ ಜೈ ಹೋ!

ಶನಿವಾರ, ಫೆಬ್ರವರಿ 6, 2010, 11:22 [IST]
ಬೆಂಗಳೂರು: ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ 102 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಫೆ. 10 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಗಲ್ ಜನ್ಮದಿನವನ್ನು ರೈತ ಮತ್ತು ಏಕೀಕರಣದ ದಿನವೆಂದು ಘೋಷಿಸಬೇಕು, ಅವರ ಆಡಳಿತ ಹಾಗೂ ಜೀವನ ಕುರಿತು ಶಾಲಾ ಪಠ್ಯದಲ್ಲಿ ಸೇರಿಸಬೇಕು ಹಾಗೂ ಹನುಮಂತಯ್ಯನವರ ಕುರಿತ ಅಂಚೆಚೀಟಿ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಹಿಂದೆ ಕುಮಾರಸ್ವಾಮಿ ಸರ್ಕಾರವಿದ್ದಾಗ ಕೆಂಗಲ್ ಹನುಮಂತಯ್ಯನವರ ಜನ್ಮ ದಿನಾಚರಣೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಆ ಹಣ ಕೇವಲ ಜಾಹಿರಾತು ಮತ್ತು ಪ್ರಚಾರ ಕಾರ್ಯಕ್ಕೆ ಬಿಟ್ಟರೆ ಕೆಂಗಲ್ ಕುರಿತು ಸಾರ್ವಜನಿಕವಾಗಿ ಕಾರ್ಯಕ್ರಮ ರೂಪಿಸಲಿಲ್ಲ ಎಂದು ಶಿವಕುಮಾರ್ ದೂರಿದರು. ಇದೇ ವೇಳೆ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ನಾರ್ಥ್ ಬ್ಲಾಕ್ ರೈಲ್ವೆ ನಿಲ್ದಾಣಕ್ಕೆ ಹನುಮಂತಯ್ಯನವರ ಹೆಸರಿಡಬೇಕು ಹಾಗೂ ಅದರೊಂದಿಗೆ ಸ್ಮಾರಕ ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ
ಮನವಿ ಪತ್ರ ಬರೆಯುವಂತೆ ಆಗ್ರಹಿಸಿದರು.
User Comments
ಹರಿಹರ 10 Feb 2010 11:37 am
"ಹನುಮಂತಯ್ಯನವರಿಗೆ ಜಯವಾಗಲಿ" ಅಂದ್ರೆ ನಿಮಾ ಗಂಟೇನು ಹೋಗುತ್ತೆ ಅಂತ ಗೊತ್ತಾಗಲಿಲ್ಲ . ಜೈ ಹೋ! ಹಿಂದೀನೋ ಉರ್ದೂನೋ ದೇವರಿಗೆ ಗೂತ್ತು. ಅಬ್ಬಾ ಅದೇನು ದಾಸ್ಯ ಮನೋಭಾವನೇನೋ, ಕೀಳರಿಮೇನೋ
ಹಳೆ ಕನ್ನಡಿಗ 06 Feb 2010 03:41 pm
ಕೆಂಗಲ್ ಹನುಮಂತಯ್ಯ ಅವರು ಬದುಕಿದ್ದಾಗ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತ್ತು. ನೊಂದ ಅವರು ತಮ್ಮದೇ ಆದ ಸುರಾಜ್ಯ ಪಕ್ಷ ಕಟ್ಟಿದ್ದರು. ಈಗ ಕಾಂಗ್ರೆಸ್ ಅವರಿಗೆ ಎಲ್ಲಿಲ್ಲದ ಮರ್ಯಾದೆ ತೋರಿಸ್ತಾ ಇರೋದು ನೋಡಿ ಅವರ ಆತ್ಮ ಖಂಡಿತ ಬೇಸರಗೊಂಡಿರುತ್ತದೆ.
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 127 / 4, 52 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article