•  

ರಾಸಲೀಲೆ : ತಿವಾರಿ ಅವರೊಬ್ಬರೇ ಅಲ್ಲರಿ

ಭಾನುವಾರ, ಡಿಸೆಂಬರ್ 27, 2009, 13:07 [IST]
ND Tiwari
ಹೈದರಾಬಾದ್, ಡಿ. 27 : ಮೂವರು ಹದಿಹರೆಯದ ಯುವತಿಯರ ಜೊತೆ ಕಾಮಕೇಳಿಯಲ್ಲಿ ತೊಡಗಿದ್ದರೆಂಬ ಆರೋಪ ಹೊತ್ತಿರುವ 86 ವರ್ಷ ವಯಸ್ಸಿನ ಆಂಧ್ರಪ್ರದೇಶದ ರಾಜ್ಯಪಾಲ ನಾರಾಯಣ ದತ್ ತಿವಾರಿ 'ಅನಾರೋಗ್ಯ'ದ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಗಣಿ ಲೈಸೆನ್ಸ್ ಮತ್ತು ಮತ್ತಿತರರಿಗೆ ಉದ್ಯೋಗ ಕೊಡಿಸುವ ಆಮಿಷ ವೊಡ್ಡಿ ರಾಸಲೀಲೆಯಲ್ಲಿ ತೊಡಗಿ ನಂತರ ತಿವಾರಿ ಮೋಸ ಮಾಡಿದ್ದರಿಂದ ಸೆಕ್ಸ್ ಟೇಪನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾಗಿ ರಾಧಿಕಾ ಎಂಬ ಯುವತಿ ಹೇಳಿದ್ದಾಳೆ.

ಈ ಲೈಂಗಿಕ ಹಗರಣ ಕೇಂದ್ರ ಆಡಳಿತದಲ್ಲಿರುವ ಯುಪಿಎ ಸರಕಾರಕ್ಕೆ ಭಾರೀ ಮುಜುಗರ ಉಂಟುಮಾಡಿದೆ. ತಿವಾರಿ ಅವರನ್ನು ಮಾಜಿ ಪ್ರಧಾನಿ ದಿವಂಗತ ನರಸಿಂಹರಾವ್ ಅವರು ಪ್ರಧಾನಿ ಆಗುವ ಮೊದಲು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲಾಗಿತ್ತು. ತಿವಾರಿ ಅವರು ಅಖಂಡ ಉತ್ತರ ಪ್ರದೇಶ ಮತ್ತು ಉತ್ತಾರಾಖಂಡದ ಮುಖ್ಯಮಂತ್ರಿ ಕೂಡ ಆಗಿದ್ದರು. ಅಂತಹ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ ಇಂಥ ಹಗರಣದಲ್ಲಿ ಭಾಗಿಯಾಗಿದ್ದು ಕಾಂಗ್ರೆಸ್ಸಿನ ವರ್ಚಸ್ಸಿಗೆ ಧಕ್ಕೆ ತಂದಿದೆ.

ರಾಜೀನಾಮೆ ಅಂಗೀಕಾರ : ಅನಾರೋಗ್ಯದ ಕಾರಣ ನೀಡಿ ಸಲ್ಲಿಸಿರುವ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕರಿಸಿದ್ದಾರೆ.
  Read:  In English 
ಇದೊಂದೇ ಅಲ್ಲ : ಆದರೆ, ರಾಜಕಾರಣಿಗಳನ್ನು ಬೆನ್ನತ್ತಿರುವ ಸೆಕ್ಸ್ ಹಗರಣಗಳು ಇದು ಮೊದಲೇನಲ್ಲ. ಕಾಂಗ್ರೆಸ್, ಬಿಜೆಪಿ, ಆರ್ಎಸ್ಎಸ್ ಮುಖಂಡರನ್ನು ಕೂಡ ಲೈಂಗಿಕ ಹಗರಣಗಳು ಹಣ್ಣುನೀರು ಮಾಡಿವೆ. ಕೆಲವೇ ವಾರಗಳ ಹಿಂದೆ ಕೇರಳದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಮೋಹನ್ ಉನ್ನಿಥನ್ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು. ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡಿದ ಆರೋಪ ಅವರ ಮೇಲಿದೆ.

ಕಳೆದ ಮಹಾಚುನಾವಣೆ ಸಮಯದಲ್ಲಿ ಸಮಾಜವಾದಿ ಪಕ್ಷದ ಜಯಪ್ರದಾ ಅವರ ನಗ್ನ ಚಿತ್ರಗಳನ್ನು ಎಲ್ಲೆಂದರಲ್ಲಿ ತೂರಾಡಿ ಅದೇ ಪಕ್ಷದ ಅಜಮ್ ಖಾನ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಚಿತ್ರಗಳು ತನ್ನವಲ್ಲವೇ ಅಲ್ಲ, ಅವು ಸೃಷ್ಟಿಸಿದವು ಎಂದು ಜಯಪ್ರದಾ ವಾದಿಸಿ ಚುನಾವಣೆಯಲ್ಲಿ ಜಯಪ್ರದರಾಗಿದ್ದರು.

ಹಿಂದೆ, 2005ರಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜಯ್ ಜೋಶಿ ಅವರು ಅಪರಿಚಿತ ಮಹಿಳೆಯೊಂದಿಗೆ ಕಾಮಕೇಳಿ ನಡೆಸಿದ ವಿಡಿಯೋ ಟೇಪ್ ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು. 2003ರಲ್ಲಿ ಉತ್ತರ ಪ್ರದೇಶದ ಮಂತ್ರಿಯಾಗಿದ್ದ ಅಮರಮಣಿ ತ್ರಿಪಾಠಿ ಕವಯಿತ್ರಿ ಮಧುಮಿತಾ ಶುಕ್ಲಾ ಅವರೊಂದಿಗೆ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು. ಭೀಕರವಾಗಿ ಕೊಲೆಯಾಗಿದ್ದ ಮಧುಮಿತಾ ಉದರದಲ್ಲಿದ್ದ ಮಗು ತ್ರಿಪಾಠಿಯದೇ ಎಂದು ಡಿಎನ್ಎ ಪರೀಕ್ಷೆ ದೃಢಪಡಿಸಿತ್ತು.

User Comments
canamedi 25 Sep 2011 09:17 pm
ಇಂತಹ ನೀತಿಗೆಟ್ಟ ಜನ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕೊಟ್ಟು ಸಾಕಿರುವ ಪಕ್ಷಕ್ಕೆ ನಾಚ್ಕೆ ನೀಥಿಮೌಲ್ಯಗಳು ಇಲ್ಲ.ಇಂತಹ ನೀತಿಗೆಟ್ಟ ಭಂಡರನ್ನು ಕಾಂಗ್ರೆಸ್ ಪಕ್ಷ ಗೊವೆರ್ನರು ಗಳಾಗಿ ಸಾಕಿ ಪ್ರಧಾನಿ ಪಟ್ಟಕ್ಕೂ ಯೋಚಿಸಿ ಇವರ ನೀತಿ ದೇಶ ಸೇವೆ ಮಾಡಲು ತಯಾರಾಗಿದ್ದು ಅವರ ಪಕ್ಷಕ್ಕೆ ಅವಮಾನ.ಇವರೆಲ್ಲ ದೊಡ್ದಮನುಷ್ಯರಾಗಿ ಮೆರೆದು ತಮ್ಮ ಯೋಗ್ಯತೆಯನ್ನು ಬ್ಬಯಲು ಮಾಡಿದ್ದಾರೆ.ಎಂತಹ ಕೆಟ್ಟಹುಲಗಳನ್ನುಹೊಂದಿ ಅಡಿಕಾರದಲ್ಲಿದ್ದ್ರೆ ಇಂತಹ ಪಕ್ಷ ಜನಕ್ಕೆ ಏನು ಕೊಡಬಲ್ಲರು?ಇಂತಹ ಪಕ್ಷ ವಾದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕ್ಲೆ ಬರದಂತೆ ಜನ ಮುಂದಿನ ಚುನಾವಣಾ ಯಲ್ಲಿ ಒಬ್ಬರಿಗೂ ಮತ ಹಾಕದೆ ಓಡಿಸಬೇಕು.
Nagaraja Rao Toronto 28 Dec 2009 05:13 pm
Can you imagine Mr.N.D.Tiwari as the Prime Minister of India doing these things and caught red handed.The system has failed miserably to appoint deserving people at the places of authority.What kind of nonsense is this?.It is disgusting.Mr. Tiwary should be held accountable for the misdeeds.What kind of example these so called elders are setting up for the youngsters.Only time will tell.Untill then these things will become norm.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article