•  

ಬಾಬ್ರಿ ಧ್ವಂಸ : ಅಡ್ವಾಣಿ, ಅಟಲ್ ಆರೋಪಿಗಳು

ಸೋಮವಾರ, ನವೆಂಬರ್ 23, 2009, 12:38 [IST]
Vajpayee
ನವದೆಹಲಿ, ನ. 23 : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್ಹಾನ್ ಸಮಿತಿ ನೀಡಿರುವ ವರದಿ ಅಧಿವೇಶನದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದೆ. ಭಾರತೀಯ ಜನತಾ ಪಕ್ಷದ ಹಿರಿಯ ತಲೆಗಳಾದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಸ್ತುತ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಅವರು ಬಾಬ್ರಿ ಮಸೀದಿ ಧ್ವಂಸಕ್ಕೆ ನೇರ ಕಾರಣ ಎಂಬ ಸಂಗತಿ ವರದಿಯಲ್ಲಿರುವುದು ಭಾರಿ ಕೌತುಕಕ್ಕೆ ಕಾರಣವಾಗಿದೆ.
  Read:  In English 
1992 ಡಿಸೆಂಬರ್ 5 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಗ್ರ ವರದಿಯನ್ನು 17 ವರ್ಷಗಳ ನಂತರ ಕಳೆದ ಜೂನ್ ತಿಂಗಳಲ್ಲಿ ನ್ಯಾಯಮೂರ್ತಿ ಎಂಎಸ್ ಲಿಬರ್ಹಾನ್ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಬಾಬ್ರಿ ಧ್ವಂಸ ಮಾಡುವುದು ಮುಂಚೆ ತಿಳಿದಿತ್ತು. ಬಾಬ್ರಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಎನ್ನುವುದು ವರದಿಯಲ್ಲಿದೆ ಎಂದು ರಾಷ್ಟ್ರೀಯ ಇಂಗ್ಲಿಷ್ ದೈನಿಕವೊಂದು ವರದಿ ಮಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ನನ್ನನ್ನೇನೂ ಕೇಳಬೇಡಿ. ನಾನು ನಿಮ್ಮ ಯಾವ ಪ್ರಶ್ನೆಗೂ ಉತ್ತರಿಸಲು ಸಿದ್ಧನಿಲ್ಲ. ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ನನ್ನ ಕೆಲಸ ಮುಗಿದಿದೆ ಎನ್ನುವುದು ನ್ಯಾಯಮೂರ್ತಿ ಲಿಬರ್ಹಾನ್ ಅವರ ಖಡಕ್ ಮಾತುಗಳು. ಚಳಗಾಲದ ಅಧಿವೇಶನ ನಡೆಯುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಸಾಧ್ಯತೆಗಳಿವೆ.

(ಏಜನ್ಸೀಸ್)
User Comments
dev 26 Nov 2009 02:37 pm
ಇದೆಲ್ ಮುಸ್ಲಿಂ ವೋಟು ಕಡಿಯೋಕೆ ಕಾಂಗ್ರೆಸ್ಸ್ ಮಾಡ್ತಾ ಇರೋ ಪ್ಲಾನ್ ಅಸ್ತೆ, ವಜ್ಪಯೀ ಅಂತ ವ್ಯಕ್ತಿ ಗೆ ಮತೊಡೋಕೆ ಕಾಂಗ್ರೆಸ್ಸ್ ಗೆ ಯಾವ ಅರ್ಹತೆಯು ಇಲ್ಲ .
ಕನ್ನಡಿಗ 23 Nov 2009 07:00 pm
ಆರೋಪಿಗಳು ಅಸ್ಟೇ ತಾನೇ... ಅಪರಾಧಿಗಳು ಅಲ್ಲ... ಮುಂದಿನ ಎಲೆಕ್ಷನ್ ಗೆ. ಈಗಿಂದನೇ ತಯ್ಯಾರಿ ನಡೆಸುತ್ತಾ ಇರುವ ಹಾಗೆ ಕಾಣಿಸ್ತಾ ಇದೆ... ಕಾಂಗ್ರೆಸ್ಸಿನಿಂದ ಇನ್ನೇನು ಅಪೇಕ್ಷಿಸಲು ಸಾದ್ಯ... ಕಳೆದ ಬಾರಿ ರಾಜೀವ್ ಗಾಂಧಿಗೆ ಮತ್ತು ಜಗದೀಶ್ ಟೈಟ್ಲರ್ ಗೆ ಕ್ಲೀನ್ ಚಿಟ್ ಕೊಡಿಸಿದ್ರು.... ಈಗ ಈ ಆಪಾದನೆ...
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article