To check Oneindia Kannada on your Mobile
go to:   http://m.oneindia.in/kannada/
  •  

ಸಚಿನ್ ಸ್ಕೋರೀಗ ಮುನ್ನೂರು ಕ್ವಿಂಟಲ್ಲು

Sachin touch pass 30k run mile stone
ಅಹಮದಾಬಾದ್, ನ. 20: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಒಟ್ಟು ಮೂವತ್ತುಸಾವಿರ ರನ್ ( ನಾಟ್ ಔಟ್) ಪೂರ್ಣಗೊಳಿಸಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಏಕದಿನ ಪಂದ್ಯದಲ್ಲಿ 17 ಸಾವಿರ ಚಿಲ್ಲರೆ ರನ್ನುಗಳು ಮತ್ತು ಟೆಸ್ಟ್ ಕ್ರಿಕೆಟಿನಲ್ಲಿ 12 ಸಾವಿರ ಚಿಲ್ಲರೆ ಗಳಿಸಿರುವ ಸಚಿನ್ ಗೆ ಒಟ್ಟಾರೆ ಮೂವತ್ತುಸಾವಿರ ರನ್ ಮೈಲಿಗಲ್ಲು ತಲುಪಲು 35 ರನ್ ಗಳ ಅವಶ್ಯಕತೆ ಇತ್ತು.

ಇತ್ತೀಚಿನ ವರದಿಗಳು ಬಂದಾಗ ಅಹಮದಾಬಾದಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ 53 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ. ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿದೆ ಮತ್ತು ಈ ಟೆಸ್ಟ್ ಪಂದ್ಯ ಬಹುತೇಕ ಎತ್ತ ಸಾಗುತ್ತಿದೆ ?

ಪಾಕಿಸ್ತಾನ ವಿರುದ್ಧ 1989 ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಸಚಿನ್ ದಾಖಲೆಯ ಮೇಲೆ ದಾಖಲೆ ಬರೆಯುತ್ತಲೇ ಬಂದಿದ್ದಾರೆ. ಇದುವರೆಗೆ 436 ಏಕದಿನ ಪಂದ್ಯವನ್ನಾಡಿರುವ ಸಚಿನ್ 45 ಶತಕ ಮತ್ತು 91 ಅರ್ಧಶತಕಗಳ ಮೂಲಕ 17,178 ರನ್ ಗಳಿಸಿದ್ದಾರೆ. ನವೆಂಬರ್ 15, 1989 ರಂದು ಕರಾಚಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಸಚಿನ್ 42 ಶತಕ ಮತ್ತು 53 ಅರ್ಧಶತಕ ಗಳಿಸಿದ್ದಾರೆ. ಅದೆಷ್ಟು ರನ್ನು ಹೊಡಿತಾನಪ್ಪಾ ಆ ಮಹರಾಯ!ಅಬ್ಬಬ್ಬಾ..

(ಏಜೆನ್ಸೀಸ್)
ನವೆಂಬರ್ 20, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
Robin Sharma Live in Bangalore
ODI, Sydney Cricket Ground
Australia: 112 / 8, 33.1 Overs
1st Twenty20 , Westpac Stadium, Wellington
South Africa: 147 / 6, 20 Overs
Play stopped for innings.

'ಬಸವಿ' ಪದ್ಧತಿ ಮೇಲೆ ಬೆಳಕು ಚೆಲ್ಲುವ 'ಇಜ್ಜೋಡು'

ಖ್ಯಾತ ನಿರ್ದೇಶಕ ಎಂ ಎಸ್ ಸತ್ಯು ಸುದೀರ್ಘ 15 ವರ್ಷಗಳ ಬಳಿಕ 'ಇಜ್ಜೋಡು' ಚಿತ್ರದೊಂದಿಗೆ ಮರಳಿದ್ದಾರೆ. ಸಮಾಜದಲ್ಲಿನ ಕಠೋರ ಆಚಾರ ವಿಚಾರಗಳನ್ನು ಆಧರಿಸಿದ ಕತೆಗಳನ್ನು ನಿರ್ವಹಿಸುವಲ್ಲಿ ಎಂ ಎಸ್ ಸತ್ಯು ಸಿದ್ಧಹಸ್ತರು. ಅವರಲ್ಲಿನ ಸೂಕ್ಷ್ಮ ಸಂವೇದನೆ 'ಇಜ್ಜೋಡು' ಚಿತ್ರದಲ್ಲಿ ಮರುಕಳುಹಿಸಿದೆ. ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಇಜ್ಜೋಡು' ಚಿತ್ರ ಪ್ರಥಮ ಪ್ರದರ್ಶನ ಕಂಡಿತು......

ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ !

ಅಹಮದಾಬಾದ್, ಸೆ. 29 : ನಂಬಿದ ದೇವರಿಗೆ ತನ್ನ ಕಣ್ಣನ್ನೇ ಕಿತ್ತುಕೊಟ್ಟ ಮಹಾಶಯನೊಬ್ಬನ ಕಥೆ ಈ ಹಿಂದೆ ರಾಜ್ಯದ ಬಾದಾಮಿಯಲ್ಲಿ ನಡೆದಿತ್ತು. ಇದೇ ಮಾದರಿಯಲ್ಲಿ ದೇವಿ ಸಂತೃಪ್ತಿಗೊಳಿಸಲು ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿಕೊಟ್ಟ ಭಕ್ತಿಯ ಪರಾಕಾಷ್ಠೆ ಮೆರೆದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಇಪ್ಪತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದ 35 ವರ್ಷದ.....

ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ

ಮುಂಬೈ,ಫೆ.13: ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು ಇಂದು ಪ್ರಕಟಿಸಲಾಯಿತು. ಫೆ. 25 ರಿಂದ ಆರಂಭವಾಗುವ ಪ್ರವಾಸದಲ್ಲಿ ಭಾರತ ತಂಡ ಟೆಸ್ಟ್, ನಿಗದಿತ ಓವರ್ ಗಳ ಪಂದ್ಯ ಹಾಗೂ ಟ್ವೆಂಟಿ 20 ಪಂದ್ಯಗಳನ್ನು ಆಡಲಿದೆ. ಟೆಸ್ಟ್ ತಂಡಕ್ಕೆ ಹರ್ಭಜನ್ ಸಿಂಗ್ ಹಾಗೂ ದಿನೇಶ್ ಕಾರ್ತಿಕ್ ತಂಡಕ್ಕೆ ಮರಳಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ20 ಪಂದ್ಯಗಳಿಗೆ.....
User Comments
ದಲಿತ ಪ್ರಜೆ 20 Nov 2009 10:56 pm
ಈ ಸಚಿನ್ ಕೂಡ ಬ್ರಾಹ್ಮಣನಲ್ಲಾ? ಹೆಂಗೆ ಗುರು ಬ್ರಾಹ್ಮಣರನ್ನ ತಡೆಯೋದು?
thatskannada updates 20 Nov 2009 04:35 pm
Its Draw : Sachin, VVS Lakshman bat to save the match in Ahmadabad. Sachin Tendulkar ( not out 100) becomes the 1st batsman to score 43 Test 100s.
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article