
ದಿಯೋಬಂದ್(ಉತ್ತರ ಪ್ರದೇಶ), ನ. 3 : ಇಸ್ಲಾಂ ಧರ್ಮಕ್ಕೆ ವಿರೋಧಿ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಗೀತೆ ವಂದೇ ಮಾತರಂ ವಿರುದ್ಧ ಇಸ್ಲಾಂ ಸಂಘಟನೆಗಳು ಇಂದು ಫತ್ವಾ ಹೊರಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುವ ರಾಜ್ಯಸಭಾ ಸದಸ್ಯ ಮಹ್ಮದ್ ಮದಾನಿ ಕೂಡಾ ಫತ್ವಾ ಪರ ದನಿಗೂಡಿಸಿದ್ದು, ಇಸ್ಲಾಂ ಧರ್ಮಕ್ಕೆ ವಿರೋಧಿಯಾಗಿರುವ ಸಾಲುಗಳನ್ನು ಕೈಬಿಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಇಂದು ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ವಿವಿಧ ಭಾಗದ ಮುಸ್ಲಿಂ ಮೌಲ್ವಿಗಳು ಭಾಗವಹಿಸಿದ್ದಾರೆ. ಭಯೋತ್ಪಾದನೆ ಮತ್ತಿತರ ವಿಷಯಗಳ ಚರ್ಚೆ ನಡೆಯುವ ಸಾಧ್ಯತೆ ಇದೆ. ನಾಳೆ ಗೃಹ ಸಚಿವ ಪಿ ಚಿದಂಬರಂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
(ಏಜನ್ಸೀಸ್)
&13;
Read: In English
ಜಮಾತೆ ಇ ಉಲೇಮಾ ಹಿಂದ್ ಸಂಘಟನೆಯ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಂದೇ ಮಾತರಂ ಗೀತೆಯಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸುವ ಸಾಲುಗಳಿವೆ. ಆ ಸಾಲುಗಳನ್ನು ತೆಗೆದು ಹಾಕಿ ಎಂದು ಒತ್ತಾಯಿಸಿವೆ. ಮುಸ್ಲಿಮರು ಯಾವುದೇ ಕಾರಣಕ್ಕೂ ವಂದೇಮಾತರಂ ಗೀತೆಯನ್ನು ಹಾಡಬಾರದು ಎಂದು ಕಟ್ಟಾಜ್ಞೆ ವಿಧಿಸಿದೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುವ ರಾಜ್ಯಸಭಾ ಸದಸ್ಯ ಮಹ್ಮದ್ ಮದಾನಿ ಕೂಡಾ ಫತ್ವಾ ಪರ ದನಿಗೂಡಿಸಿದ್ದು, ಇಸ್ಲಾಂ ಧರ್ಮಕ್ಕೆ ವಿರೋಧಿಯಾಗಿರುವ ಸಾಲುಗಳನ್ನು ಕೈಬಿಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಇಂದು ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ವಿವಿಧ ಭಾಗದ ಮುಸ್ಲಿಂ ಮೌಲ್ವಿಗಳು ಭಾಗವಹಿಸಿದ್ದಾರೆ. ಭಯೋತ್ಪಾದನೆ ಮತ್ತಿತರ ವಿಷಯಗಳ ಚರ್ಚೆ ನಡೆಯುವ ಸಾಧ್ಯತೆ ಇದೆ. ನಾಳೆ ಗೃಹ ಸಚಿವ ಪಿ ಚಿದಂಬರಂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
(ಏಜನ್ಸೀಸ್)
&13;














