
ಚೆನ್ನೈ, ಅ. 28 : ಒಂದು ಶತಮಾನದ ನಂತರ ಮೊದಲ ಬಾರಿಗೆ ದಲಿತರು ದೇವಸ್ಥಾನದ ಒಳಗೆ ಕಾಲಿಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾದ ಸಂಗತಿ ತಮಿಳುನಾಡಿನಲ್ಲಿ ನಡೆದಿದೆ.
ಬಾಗಿಲು ಒಡೆದು ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದ ದಲಿತರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಪೊಲೀಸರನ್ನು ಹಿಮ್ಮೆಟ್ಟಿಸಲು ದಲಿತರು ಕಲ್ಲುಗಳನ್ನು ಎಸೆದಿದ್ದರು. ಸರಕಾರ ಮಧ್ಯಪ್ರವೇಶ ಮಾಡಿ ದಲಿತರು ಮತ್ತು ದಲಿತರಲ್ಲದವರ ನಡುವೆ ಸಂಧಾನ ಮಾತುಕತೆಗಳನ್ನು ನಡೆಸಿತ್ತು. ಅದರ ಫಲಶ್ರುತಿಯಾಗಿ ದಲಿತರು ದೇಗುಲದ ಒಳಹೊಕ್ಕರು. ಮತ್ತೆ ಗಲಭೆಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸರು ಕೆಲವು ದಿನ ದೇವಸ್ಥಾನದ ಆವರಣದಲ್ಲಿ ಠಿಕಾಣಿ ಹೂಡಿದ್ದಾರೆ.
(ಏಜನ್ಸೀಸ್)
Read: In English
ನಾಗಪಟ್ಟಿನಮ್ ಜಿಲ್ಲೆಯ ಚೆಟ್ಟಪುಲ್ಲಂ ಎಂಬ ಹಳ್ಳಿಯಲ್ಲಿ ಮಂಗಳವಾರ ದಲಿತರು ಏಕಾಂಬರೇಶ್ವರ ದೇವಸ್ಥಾನವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದರು. ಸುಮಾರು ಅರ್ಧ ಗಂಟೆಕಾಲ ಅವರ ಪ್ರಾರ್ಥನೆ, ನಮಸ್ಕಾರ ವಿಧಿಗಳು ಸಾಗಿದವು.ಬಾಗಿಲು ಒಡೆದು ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದ ದಲಿತರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಪೊಲೀಸರನ್ನು ಹಿಮ್ಮೆಟ್ಟಿಸಲು ದಲಿತರು ಕಲ್ಲುಗಳನ್ನು ಎಸೆದಿದ್ದರು. ಸರಕಾರ ಮಧ್ಯಪ್ರವೇಶ ಮಾಡಿ ದಲಿತರು ಮತ್ತು ದಲಿತರಲ್ಲದವರ ನಡುವೆ ಸಂಧಾನ ಮಾತುಕತೆಗಳನ್ನು ನಡೆಸಿತ್ತು. ಅದರ ಫಲಶ್ರುತಿಯಾಗಿ ದಲಿತರು ದೇಗುಲದ ಒಳಹೊಕ್ಕರು. ಮತ್ತೆ ಗಲಭೆಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸರು ಕೆಲವು ದಿನ ದೇವಸ್ಥಾನದ ಆವರಣದಲ್ಲಿ ಠಿಕಾಣಿ ಹೂಡಿದ್ದಾರೆ.
(ಏಜನ್ಸೀಸ್)















