•  

ಪೇಶಾವರದಲ್ಲಿ ಭೀಕರ ಸ್ಫೋಟ 44 ಸಾವು

ಶುಕ್ರವಾರ, ಅಕ್ಟೋಬರ್ 9, 2009, 15:41 [IST]
Deadly blast hits Pakistan city Peshawar
ಪೇಶಾವರ, ಅ. 9 : ನಗರದ ಪ್ರಮುಖ ಕೇಂದ್ರ ಖೈಬರ್ ಬಜಾರ್ ರಸ್ತೆಯ ಬದಿಯಲ್ಲಿ ಸ್ಪೋಟಕಗಳನ್ನು ಇರಿಸಲಾಗಿದ್ದ ಅತ್ಮಾಹುತಿ ಕಾರು ಬಾಂಬರ್ ಸ್ಫೋಟಗೊಂಡಿದ್ದು, ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. 100 ಹೆಚ್ಚೂ ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಅಮೆರಿಕ ಸೇನಾಪಡೆ ತಾಲಿಬಾನ್ ಮತ್ತು ಆಲ್ ಖೈದಾ ಹಿಡಿತದಲ್ಲಿರುವ ವಾಜರೀಸ್ತಾನದ ಮೇಲೆ ದಾಳಿ ಸೇನಾ ದಾಳಿ ನಡೆಸಲು ಸಿದ್ದತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
  Read:  In English 
ವಾಜರೀಸ್ತಾನದ ಮೇಲೆ ಅಮೆರಿಕ ಸೇನಾಪಡೆಗೆ ಪಾಕಿಸ್ತಾನ ಸರಕಾರ ಬೆಂಬಲ ಸೂಚಿಸಿರುವುದು ಉಗ್ರರ ಕೋಪಕ್ಕೆ ಕಾರಣವಾಗಿದೆ. ಕಾರಿನಲ್ಲಿ ಇರಿಸಿ ಸ್ಫೋಟಿಸಲಾದ ಬಾಂಬ್ ದಾಳಿಯ ಭೀಕರತೆ ಅಕ್ಕಪಕ್ಕದಲ್ಲಿದ್ದ ಅನೇಕ ವಾಹನಗಳು ಮತ್ತು ಕಟ್ಟಡಗಳು ಜಖಂಗೊಂಡಿವೆ. ಮೂಲಗಳು ಪ್ರಕಾರ 44 ಮಂದಿ ಮೃತಪಟ್ಟಿದ್ದಾರೆ. 100 ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೇಶಾವರ ಪೊಲೀಸ್ ಮೂಲಗಳು ತಿಳಿಸಿವೆ.

ಗುರುವಾರವಷ್ಟೇ ತಾಲಿಬಾನ್ ಉಗ್ರರು ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗುರಿಯಾಗಿರಿಸಿಕೊಂಡು ಬಾಂಬ್ ಸ್ಪೋಟಿಸಿದ್ದರು. ಕೃತ್ಯದಲ್ಲಿ 4 ಮಂದಿ ಅಪ್ಘನ್ನರು ಮೃತಪಟ್ಟಿದ್ದರು. ಭಾರತೀಯ ರಾಯಬಾರಿ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದರು. ತಾಲಿಬಾನ್ ಮತ್ತು ಆಲ್ ಖೈದಾ ಉಗ್ರರ ವಶದಲ್ಲಿರುವ ವಾಜರೀಸ್ತಾನದ ಮೇಲೆ ಅಮೆರಿಕ ಮತ್ತಪ ಪಾಕಿಸ್ತಾನದ ಸೇನಾಪಡೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಉಗ್ರರ ಕೆಂಗಣ್ಣಿಗೆ ಗುರಿಯಾಗಿದೆ.

(ಏಜನ್ಸೀಸ್)
User Comments
copy 12 Oct 2009 11:17 am
ಇದು ಸ್ವಲ್ಪ ಆಪ್ ಟಾಪಿಕ್ ಅನ್ನಿಸಬಹುದು. ಈ ಕೆಳಗೆ ಚಿಕ್ಕದೊಂದು ಜಿಜ್ಞಾಸೆ. ಗೊತ್ತಿದ್ದವರು ಉತ್ತರಿಸಬಹುದು
copy 12 Oct 2009 11:17 am
ನೋಡಿ ಈ ಅಬ್ರಹಮಿಕ್ ಧರ್ಮಗಳ ಕಾನ್ಸೆಪ್ಟ್. ಬೇರೆ ಬೇರೆ ಧರ್ಮಗಳ ವರ್ಶನ್ ಗಳು (jews, christians ಮತ್ತು ಮುಸ್ಲಿಮ್ಸ್). ಅವೇನು ಸಾಫ್ಟ್ವೇರ್ ರಿಲೀಸ್ ಗಳ? :) ಅಂದ್ರೆ ದೇವರೂ ಕೂಡ ಇವರ ಪ್ರಕಾರ ಬೇರೆ ಬೇರೆ ರಿಲೀಸ್ ಮಾಡಿದ್ನ? ಮೊದಲು ಮೋಸೆಸ್. ನಂತರ ಬಗ್ಸ್ ಅಪ್ಡೇಟ್ ಮಾಡಿ ಜೀಸಸ್. ಆಮೇಲೆ ಮತ್ತೆ ಬಗ್ಸ್ ಅಪ್ಡೇಟ್ ಮಾಡಿ ಮೊಹಮ್ಮದ್. ಅಂದ್ರೆ ದೇವರಿಗೂ ಗೊತ್ತಿತ್ತ ಮೊದಲೆರಡು ರಿಲೀಸ್ ಗಳಲ್ಲಿ ಬಗ್ಸ್ ಇರುತ್ತೆ ಅಂತ? :) ಮತ್ತೆ ಹಾಗಾದ್ರೆ ದೇವ್ರು ಬಗ್ಸ್ ಅಪ್ಡೇಟ್ ಮಾಡ್ಲಿಕ್ಕೆ ಸುಮಾರು ೭೦೦ ವರ್ಷ ತೊಗೊಂದನ? (ಜೀಸಸ್ ನಿಂದ ಪ್ರವಾದಿಗೆ ಸುಮಾರು ೭೦೦ ವರ್ಷ)>>>> :) ಅದೆಲ್ಲ ಬಿಡಿ. ಈಗ ಮಜಾ ನೋಡಿ. .....
copy 12 Oct 2009 11:19 am
ಮುಂದಿದೆ.....ಅದೇಗೆ ದೇವರಿಗೆ ಗೊತ್ತು ಮೋಹಮ್ಮದನೆ ಕೊನೆಯ ರಿಲೀಸ್ ಅಂತ? ಮತ್ತೆ ಬಗ್ಸ್ + ನ್ಯೂ features ಸೇರಿಸಿ ಹೊಸ ರಿಲೀಸ್ ಮಾಡಬಹುದಲ್ಲ? ಹಾಗೆ ಮಾಡದಿದ್ದರೆ ಹಳೆಯ ರಿಲೀಸ್ ಉಪಯೋಗಿಸದಂತಾಗಿ ಜನ ವಿರೋಧಿಯಾಗುತ್ತಲ್ಲ. :) ಈಗ ಆಗಿರೋದೆ ಅದು ಅಲ್ವ ಎಲ್ಲಿ ನೋಡಿದ್ರೂ ತೆರ್ರೋರಿಸಂ. ಮುಸ್ಲಿಮರು ಜೀಸಸ್ ನಂಬ್ತಾರೆ. ಆದ್ರೆ ಕ್ರಿಸ್ತರು ಮೊಹಮ್ಮದ್ ನನ್ನು ನಂಬಲ್ಲ. ಅಂದ್ರೆ ಚೀನಾ ಮೊಬೈಲ್ ಇದ್ದಂಗೆ (duplicate ?). :) ಸರಿ ಬಿಡಿ ಅವ್ರು ಹಾಗೆ ನಂಬಿದ್ರೆ ನಮಗೇನು ತೊಂದ್ರೆ ಇಲ್ಲ ಆದ್ರೆ ಕುತೂಹಲಕ್ಕಾಗಿ ಬರೆದೆ ಅಷ್ಟೇ. ನಾನು ದೇವರಿಗೆ ಏನು ಅನ್ನಲಿಲ್ಲ. ಆದ್ರೆ ಈ ಕಾನ್ಸೆಪ್ಟ್ ಎಷ್ಟು ಸರಿ ಅಂತ ಒಂದು ಪ್ರಶ್ನೆ.
ಮನ್ಸೂರ್ 09 Oct 2009 04:55 pm
ಜಗತ್ತಿಗೆ ತಲೆನೋವಾಗಿರುವ ಈ ಅಲ್ಖೈದಾ, ಈ ದರಿದ್ರ ತಾಲಿಬಾನ್ ಮೂಲಭೋತವಾದಿಗಲನ್ನು ಬೇರು ಸಹಿತ ಕಿತ್ತು ಹಾಕಲು ಈ ಒಡೆದು ಹಾಳುವ ನೀತಿ ಅನುಸರಿಸುತ್ತಿರುವ ಅಮೆರಿಕ ,ಬ್ರಿಟನ್ ರಾಷ್ಟ್ರಗಳು ಭಾರತಕ್ಕೆ ಸಹಾಕಾರ ನೀಡದೆ ಒಂದೆಡೆ ಪಾಕಿಸ್ತಾನಕ್ಕೆ ಯುದ್ದ ವಿಮಾನಗಳನ್ನು ನೀಡುತ್ತಾ ಮತ್ತೊಂದೆಡೆ ಭಯೋತ್ಪಾದಕರನ್ನು ಮಟ್ಟ ಹಾಕಲು ಹೊರಟವರಂತೆ ನಾಟಕವಾಡುತ್ತಿರುವುದನ್ನು ನಿಲ್ಲಿಸಬೇಕು.ನಿಜಕ್ಕೂ ಭಯೋತ್ಪಾದಕರನ್ನು ಅಳಿಸಿ ಹಾಕುವ ತಾಕತ್ತಿದ್ದರೆ ಭಾರತದ ಜೊತೆ ಸಹಕರಿಸಿ ತೋರಿಸಲಿ.
ರಮೇಶ ABCD 09 Oct 2009 05:02 pm
ಮನ್ಸೂರ್ ನಿಮ್ಮ ಕಳಕಳಿಯನ್ನು ಮೆಚ್ಚಿದೆ. ಆದ್ರೆ ಇದ್ರಲ್ಲಿ ಭಾರತ ಕೈಜೋಡಿಸಿದರೆ ಭಾರತದಲ್ಲೂ ಆ ಮೂಲಭೂತವಾದಿಗಳು ತಮ್ಮ ಕೆಟ್ಟ ಕೆಲಸ ಶುರು ಮಾಡಲ್ವ. ಈಗಾಗಲೇ ಎಷ್ಟೋ ಮಾಡಿದ್ದಾರೆ. ಭಾರತ ಪಾಕಿನ ಪಕ್ಕನೆ ಇದೆ ಅದಕ್ಕೆ ಅಪಾಯ ಜಾಸ್ತಿ. ಆದ್ರೆ ಅಮೇರಿಕ ದೂರ ಇದೆ. ಅದೂ ಅಲ್ದೆ ಅವ್ರ ದೇಶದ ಒಳಗೆ ಹೋಗೋದು ನಮ್ಮ ಭಾರತಕ್ಕೆ ಬಂದಷ್ಟು ಸುಲಭ ಅಲ್ಲ. ಪಾಕ್ ಸರಕಾರವೇ ಆ ಉಗ್ರರನ್ನು ಬೆಳೆಸಿದೆ ಅವ್ರೆ ಏನಾದ್ರು ಮಾಡಿಕೊಳ್ಳಲಿ. ದಾರಿಯಲ್ಲಿ ಹೋಗೋ ಮಾರಿಯನ್ನು ಮನೆಯಲ್ಲಿ ಯಾಕೆ ಬಿಟ್ಟುಕೊಲ್ಲಬೇಕು.
ನಾಣಿ 10 Oct 2009 06:21 am
ಮನ್ಸೂರ್, ನಿಮ್ಮ ಮಾತು ಸತ್ಯ, ನಿಮ್ಮ ಮಾನವೀಯತೆ ಮೆಚ್ಚುವಂತದ್ದು. ಇದೇ ಮಾನವೀಯತೆ ನಿಮ್ಮ ಪ್ರವಾದಿಗೂ ಮತ್ತು ಉಳಿದ ಮುಸ್ಲಿಮರಿಗೂ ಇದ್ದಿದ್ದರೆ ನಮಗೆ ಈ ಕೆಟ್ಟ, ಭೀಕರ ದಿನಗಳು ಕಾಣುವ ದೌರ್ಭಾಗ್ಯವಿರುತ್ತಿರಲಿಲ್ಲ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article