•  

ವೇಲುಪಿಲೈ ಪ್ರಭಾಕರನ್ ಸತ್ತಿಲ್ಲ, ಎಲ್ ಟಿಟಿಇ

ಮಂಗಳವಾರ, ಮೇ 19, 2009, 11:29 [IST]
Prabhakaran
ಕೊಲಂಬೋ, ಮೇ. 19 : ಸೋಮವಾರವಷ್ಟೆ ಶ್ರೀಲಂಕಾ ಸರಕಾರ ಎಲ್ ಟಿಟಿಇ ಮುಖಂಡ ಉಗ್ರ ವಿ ಪ್ರಭಾಕರನ್ ಅವರನ್ನು ಕೊಂದು ಮುಗಿಸಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಇಂದು ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ಎಲ್ ಟಿಟಿಇ ಬೆಂಬಲಿತ ತಮಿಳು ವೆಬ್ ಸೈಟ್ ತಮಿಳ್ ನೆಟ್.ಕಾಂ ವರದಿ ಮಾಡಿದೆ.

ಶ್ರೀಲಂಕಾ ಸರಕಾರ ತಮಿಳರ ಮೇಲೆ ಸಾರಿರುವ ಯುದ್ಧದಲ್ಲಿ ಲಂಕಾತಮಿಳರ ಆರಾಧ್ಯದೈವ ವೇಲುಪಿಲೈ ಪ್ರಭಾಕರನ್ ಮೃತಪಟ್ಟಿಲ್ಲ, ಅವರು ಜೀವಂತವಾಗಿ ಸುರಕ್ಷಿತವಾಗಿ ಇದ್ದಾರೆ ಎಂದು ಎಲ್ ಟಿಟಇ ಅಂತಾರಾಷ್ಟ್ರೀಯ ವಕ್ತಾರ ಎಸ್ ಪತಮನತನ್ ತಿಳಿಸಿದ್ದಾರೆ ಎಂದು ವೆಬ್ ಸೈಟ್ ನಲ್ಲಿ ಪ್ರಕಟಿವಾಗಿದೆ. ಶ್ರೀಲಂಕಾ ಸರಕಾರ ಪ್ರಭಾಕರನ್ ಸತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದೆ ಎಂದು ಅಸಮಾಧಾನಗೊಂಡಿರುವ ಅವರು, ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದಾಗಿ ಹೇಳಿದ್ದಾರೆ.
  Read:  In English 
ಅಮಾಯಕ ತಮಿಳರ ಮೇಲೆ ಶ್ರೀಲಂಕಾ ಸರಕಾರ ಯುದ್ಧ ನಡೆಸುತ್ತಿದೆ. ಲಂಕಾ ಸರಕಾರದ ದಾಳಿಯಿಂದಾಗಿ ಲಕ್ಷಾಂತರ ಜನ ತಮಿಳರು ಸಾವಿಗೀಡಾಗಿದ್ದಾರೆ. ಕೋಟ್ಯಂತರ ಜನ ವಸತಿಹೀನರಾಗಿದ್ದಾರೆ. ಶ್ರೀಲಂಕಾ ಸರಕಾರ ಮಾವವ ಹಕ್ಕುಗಳ ಉಲ್ಲಂಘನೆ ಕೃತ್ಯ ಎಸಗುತ್ತಿದೆ ಎಂದು ಎಲ್ ಟಿಟಿಇ ವಕ್ತಾರ ತಿಳಿಸಿದ್ದಾರೆ ಎಂದು ವೆಬ್ ಸೈಟ್ ಪ್ರಕಟಿಸಿದೆ.

(ಏಜನ್ಸೀಸ್)

ಪೂರಕ ಓದಿಗೆ: ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆ
User Comments
ನಯನ 21 May 2009 03:25 pm
ಇನ್ನಾದರೂ ಶ್ರೀ ಲಂಕಾ ತಮಿಳರು ಬುದ್ದಿ ಕಲಿಯಲಿ. ನಾಯಕ ಇಲ್ಲದ ಶ್ರೀ ಲಂಕಾ ತಮಿಳರು ಶ್ರೀ ಲಂಕಾ ಜನತೆ ಜೊತೆ ಶಾಂತಿಯಿಂದ ಇನ್ನಾದರೂ ಶಾಂತರೀತಿಯಿಂದ ಬಾಳಲಿ.
ಕನ್ನಡಿಗ 20 May 2009 07:53 am
ಈ ಕೊ೦ಗು ನನ್ನಮಗ ಸತ್ತಿದ್ದು ಒಳ್ಳೆಯದೇ ಆಯ್ತು. ಈ ತಮಿಳು ಬಡ್ಡೇಹತ್ತವು ಎಲ್ಲಾ ಒ೦ದೇ. ಅತೀ ಭಾಷಾ ದುರಭಿಮಾನಿಗಳು.ಕರುಣಾನಿಧಿ,ಜಯಲಲಿತ,ವೈಕೊ ಎಲ್ಲಾ ದೇಷದ್ರೋಹಿಗಳು. ಈ ಶ್ರೀ ಲ೦ಕಾದವೂ ಹಾಗೆಯೇ. ಮೊದಲು ಏಲ೦ ಅತ೦ವೇ, ಆಮೇಲೆ ತಮಿಳು ದೇಶ೦ ಅ೦ತ ಹಿ೦ದೂಸ್ತಾನಕ್ಕೆ ಬತ್ತಿ ಇಡ್ತಾವೆ.ರಾಜೀವ್ ಗಾ೦ದಿ ಹತ್ಯೆ ಮಾಡಿದವ್ರೂ ಇವರೇ. ತಮಿಳು ನಾಡಿಗೆ ಕಾವೇರಿ ನೀರು ಕೊಡಕಾಯಕಿಲ್ಲ ಅ೦ದರೆ ಕನ್ನ೦ಬಾಡಿ ಅಣೆಕಟ್ಟೆಗೇ ಬಾ೦ಬ್ ಇಡಿತೀವಿ ಅ೦ದವ್ರೂ ಇದೇ ಶ್ರೀ ಲ೦ಕಾದ ತಮಿಳರು.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article