
ಬೆಂಗಳೂರು, ಏ. 2 : ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಸಾಹಿತಿ, ಚಿಂತಕ ತೇಜಸ್ವಿ ಅವರ ನೆನಪಿಗಾಗಿ "ಮೂಡಿಗೆರೆಯ ಮಾಯಾವಿ" ಎಂಬ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಎದುರುಗಡೆ ಇರುವ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಸಭಾಂಗಣದಲ್ಲಿ ಏಪ್ರಿಲ್ 4 ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಖ್ಯಾತಿ ಸಾಹಿತಿ, ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರ ತೇಜಸ್ವಿ ಅವರೊಂದಿಗಿನ ಒಡನಾಟದ ಮೆಲುಕು ಹಾಕಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ವಹಿಸುವರು. ಕೃಪಾಕರ-ಸೇನಾನಿ ಅವರ ಡಾಕ್ಯುಮೆಂಟರಿ 'ಮಾಯಾಲೋಕ 'ಪ್ರದರ್ಶನಗೊಳ್ಳಲಿದೆ. ತೇಜಸ್ವಿ ಇಲ್ಲವಾಗಿ ಏಪ್ರಿಲ್ 5ಕ್ಕೆ ಎರಡು ವರ್ಷ ತುಂಬಲಿದೆ.
(ದಟ್ಸ್ ಕನ್ನಡ ವಾರ್ತೆ)
ಖ್ಯಾತಿ ಸಾಹಿತಿ, ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರ ತೇಜಸ್ವಿ ಅವರೊಂದಿಗಿನ ಒಡನಾಟದ ಮೆಲುಕು ಹಾಕಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ವಹಿಸುವರು. ಕೃಪಾಕರ-ಸೇನಾನಿ ಅವರ ಡಾಕ್ಯುಮೆಂಟರಿ 'ಮಾಯಾಲೋಕ 'ಪ್ರದರ್ಶನಗೊಳ್ಳಲಿದೆ. ತೇಜಸ್ವಿ ಇಲ್ಲವಾಗಿ ಏಪ್ರಿಲ್ 5ಕ್ಕೆ ಎರಡು ವರ್ಷ ತುಂಬಲಿದೆ.
(ದಟ್ಸ್ ಕನ್ನಡ ವಾರ್ತೆ)















