
ಬೆಂಗಳೂರು, ಮಾ. 28: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತ ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಅನಿವಾಸಿ ಕನ್ನಡಿಗರು ಅಖಾಡಕ್ಕೆ ಇಳಿಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರನ್ನು 'ನೀವು ಈ ಬಾರಿ ಸ್ಪರ್ಧಿಸುತ್ತೀರಾ?' ಎಂದು ಕೇಳಿದಾಗ, "ನನಗೀಗ 62 ವರ್ಷ, ಚುನಾವಣೆಯಲ್ಲಿ ಸ್ಪರ್ಧಿಸುವ ವಯೋಮಿತಿ ಮೀರಿದ್ದೀನಿ. ನನಗೆ ಸ್ಪರ್ಧಿಸುವ ಮನಸ್ಸಿಲ್ಲ. ಆದರೆ ಖಂಡಿತಾ ಮತದಾನ ಮಾಡುತ್ತೇನೆ" ಎಂದು ಉತ್ತರಿಸಿದ್ದಾರೆ.
ನಮ್ಮ ದೇಶದ ಪ್ರಜಾಪ್ರಬುತ್ವ ಇನ್ನೂ ಶೈಶವದಲ್ಲಿದೆ ಕಾಲಕಳೆದಂತೆ ಪ್ರಬುದ್ಧತೆ ಪಡೆಯುತ್ತದೆ ಎಂದ ಇನ್ಫಿ ಮೂರ್ತಿ, ಜಾಗತಿಕ ಆರ್ಥಿಕ ಕುಸಿತದಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಹಿನ್ನೆಡೆ ಉಂಟಾಗಿರುವುದು ನಿಜ. ಆದರೆ ಅದು ಶಾಶ್ವತವಲ್ಲ. ಸಂಘಟಿತ ಕಾರ್ಯ ಯೋಜನೆಯಿಂದಏಳಿಗೆ ಸಾಧ್ಯವಿದೆ. ಈಗಷ್ಟೇ ವೃತ್ತಿಗೆ ಸೇರಿರುವ ಕಿರಿಯ ಉದ್ಯೋಗಿಗಳಿಗೆ ಇದು ಪಾಠ ಕಲಿಯುವ ಕಾಲ. ಸಹನೆ ಮುಖ್ಯ ಎಂದರು.
(ದಟ್ಸ್ ಕನ್ನಡ ವಾರ್ತೆ)
ಕನಸುಕಂಗಳ 'ರಾಜಕಾರಣಿ' ರಾಜೀವ್ ಗೌಡ
ಬ್ಯಾಂಕರ್ ಮೀರಾ ಸನ್ಯಾಲ್ ಮುಂಬೈದಿಂದ ಕಣಕ್ಕೆ
ನಮ್ಮ ದೇಶದ ಪ್ರಜಾಪ್ರಬುತ್ವ ಇನ್ನೂ ಶೈಶವದಲ್ಲಿದೆ ಕಾಲಕಳೆದಂತೆ ಪ್ರಬುದ್ಧತೆ ಪಡೆಯುತ್ತದೆ ಎಂದ ಇನ್ಫಿ ಮೂರ್ತಿ, ಜಾಗತಿಕ ಆರ್ಥಿಕ ಕುಸಿತದಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಹಿನ್ನೆಡೆ ಉಂಟಾಗಿರುವುದು ನಿಜ. ಆದರೆ ಅದು ಶಾಶ್ವತವಲ್ಲ. ಸಂಘಟಿತ ಕಾರ್ಯ ಯೋಜನೆಯಿಂದಏಳಿಗೆ ಸಾಧ್ಯವಿದೆ. ಈಗಷ್ಟೇ ವೃತ್ತಿಗೆ ಸೇರಿರುವ ಕಿರಿಯ ಉದ್ಯೋಗಿಗಳಿಗೆ ಇದು ಪಾಠ ಕಲಿಯುವ ಕಾಲ. ಸಹನೆ ಮುಖ್ಯ ಎಂದರು.
(ದಟ್ಸ್ ಕನ್ನಡ ವಾರ್ತೆ)
ಕನಸುಕಂಗಳ 'ರಾಜಕಾರಣಿ' ರಾಜೀವ್ ಗೌಡ
ಬ್ಯಾಂಕರ್ ಮೀರಾ ಸನ್ಯಾಲ್ ಮುಂಬೈದಿಂದ ಕಣಕ್ಕೆ













