•  

ನಿಮ್ಮ ಮರ್ಜಿಯಂತೆ ಇಗರ್ಜಿ, ಮಂದಿರ ಕಟ್ಟುವಂತಿಲ್ಲ

ಶನಿವಾರ, ಮಾರ್ಚ್ 7, 2009, 18:10 [IST]
No church, temple or masjid in public sites: HC
ಬೆಂಗಳೂರು, ಮಾ.7: ಮಂದಿರ, ಮಸೀದಿ ಮತ್ತು ಇಗರ್ಜಿಗಳನ್ನು ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ. ಈ ಸಂಬಂಧ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಏಕರೀತಿಯ ನಿರ್ಧಾರಕ್ಕೆ ಬರಬೇಕು ಎಂದು ಗಡುವು ವಿಧಿಸಿದೆ. ಮಂದಿರ, ಮಸೀದಿ, ಚರ್ಚುಗಳು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
  Read:  In English 
''ಕಡುಬಡವನೊಬ್ಬ ಒಂದು ತುಂಡು ಭೂಮಿಯನ್ನು ಒತ್ತುವರಿ ಮಾಡಿದರೆ ಅದನ್ನೇ ದೊಡ್ಡ ವಿಷಯ ಮಾಡುತ್ತೀರಿ. ಅದೇ ದೇವರ ಹೆಸರಿನಲ್ಲಿ ಭೂಮಿ ಕಬಳಿಸಿದರೆ ನೀವು ಕಣ್ಮುಚ್ಚಿ ಸುಮ್ಮನಿರುತ್ತೀರಿ. ಕಾನೂನು ಎಲ್ಲರಿಗೂ ಒಂದೇ. ದೇವರಾದರೂ ಅಷ್ಟೆ ಯಾರಾದರೂ ಅಷ್ಟೇ ಕ್ರಮ ಕೈಗೊಳ್ಳಿ" ಎಂದು ಹೈಕೋರ್ಟ್ ಆಜ್ಞೆ ಮಾಡಿದೆ.

"ಸಾರ್ವಜನಿಕ ಸ್ಥಳಗಳಲ್ಲಿ ಮಸೀದಿ, ಮಂದಿರ ಅಥವಾ ಚರ್ಚು ಇರಬಾರದು. ಇದು ನ್ಯಾಯಾಲಯದ ನಿರ್ಧಾರ. ಈ ವಿಷಯದಲ್ಲಿ ಭಾವನಾತ್ಮಕ ವಿಷಯಗಳನ್ನು ಬದಿಗಿಟ್ಟು ಕಠಿಣ ಕ್ರಮ ಕೈಗೊಳ್ಳಿ " ಎಂದು ಮುಖ್ಯ ನಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠ ಕಟ್ಟುನಿಟ್ಟಾಗಿ ಹೇಳಿದೆ. ಓಕಳಿಪುರಂನ ಲಕ್ಷ್ಮಣರಾವ್ ಉದ್ಯಾನವನವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)
User Comments
ಪ್ರಾಣೇಶ್ ಅಚಾರ್ಯಾ 20 Jan 2010 05:14 pm
ಕ್ರೈಸ್ತರಲ್ಲಿ ಮುಸಲ್ಮಾನರಲ್ಲಿ ದೇವರನ್ನು ಕಂಡವರಿಲ್ಲ ಅದ್ದರಿಂದ ಈ ಕ್ಯಾತೆಯಲ್ಲಿ ಹಿಂದುಗಳಿಗೆ ಮಾತ್ರಾ ಅನ್ಯಾಯ ವಾಗುತ್ತದೆ. ಇದು ಇನ್ನೊಂದು ರೀತಿಯ ಸೆಕ್ಯುಲರಿಸಂ ದ್ರೋಹದ ತರಹ. ಕೋರ್ಟಿನ tIರ್ಪುಗಳನ್ನು ಅಲ್ಲಗಳೆಯಲು ಮುಸಲ್ಮಾನರಿಗಾಗಿ ಕಾನೂನಿಗೆ ತಿದ್ದುಪಡಿ ಮಾಡುತ್ತಾರೆ. ಹಿಂದುಗಳ ಕಥೆ ಗೋವಿಂದಾ ..... ಗೋವಿಂದಾ ....
ಸುಬ್ಬು 08 Mar 2009 10:54 pm
ಆರಾಧನಯಗಳು ಯಾಕೆ ಹೋಗ್ಬೇಕು ಅಬ್ದುಲ್, ಕಟ್ಟಿರೋದು ನೀವು ಸಾರ್ವಜನಿಕ ಸ್ಥಳ. ಅದರ ಬಗ್ಗೆ ನೀನು ಮಾತಾಡಲ್ಲ, ಗುಡಿ ನಿಂಗೆ ಕಾಣುತ್ತೆ ಅಲ್ವ. ಆದ್ರೆ ಸರ್ಕಾರಿ ಜಾಗದಲ್ಲಿ ಬೇಜಾನು ಮಸಿದೀನು ಇದೆ. ವಿಷಯ ಯಾಕೆ ತಿರುಗಿಸ್ಥ ಇದೀಯ? ನೀನು ISI ಏಜೆಂಟ?
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 85 / 5, 16.2 Overs
1st Test , Lord's Cricket Ground, St John's Wood
West Indies: 74 / 2, 24.2 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article