ಮೈಸೂರು : ಪೂರ್ಣಚಂದ್ರ ತೇಜಸ್ವಿಯವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸದೆ ಸಾಹಿತ್ಯಲೋಕಕ್ಕೆ ಅಗೌರವ ತೋರಿದ್ದಾರೆ ಎಂದು ಮಾಜಿ ಸಚಿವ ವಿಶ್ವನಾಥ್ ಆರೋಪಿಸಿದ್ದಾರೆ.ಭಾನುವಾರ(ಏಪ್ರಿಲ್ 8) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಗಳು ರಾತ್ರೋರಾತ್ರಿ ಕುಗ್ರಾಮಗಳಲ್ಲಿನ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಯಾರನ್ನೋ ಮಂಗಳೂರಿನ ಆಸ್ಪತ್ರೆಯಲ್ಲಿ ಭೇಟಿಯಾಗುತ್ತಾರೆ. ಆದರೆ ಶ್ರೇಷ್ಠ ವ್ಯಕ್ತಿಯಾಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿದ್ದುದು ಮಾತ್ರ ಅನ್ಯಾಯ ಎಂದು ಟೀಕಿಸದರು.
ತೇಜಸ್ವಿಯವರು ಕೋಮುವಾದ ಖಂಡಿಸುತ್ತಿದ್ದರು. ಆದರೆ ಕೋಮುವಾದಿ ಬಿಜೆಪಿ ನಾಯಕ-ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೇಜಸ್ವಿಯವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದ್ದು ಕೂಡ ಬೇಸರದ ವಿಚಾರ ಎಂದು ಅಭಿಪ್ರಾಯಪಟ್ಟರು.
(ಏಜನ್ಸೀಸ್)















