•  

ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸೋ ಯತ್ನ ವಿಫಲ!

ಬುಧವಾರ, ಜೂನ್ 28, 2006, 23:53 [IST]
ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸೋ ಯತ್ನ ವಿಫಲ!
ಕುಶಾಲ ನಗರ ಪೊಲೀಸರ ಕಾರ್ಯಾಚರಣೆ, 240 ಮೂಟೆ ನಕಲಿ ಗೊಬ್ಬರ ವಶ

ಮಡಿಕೇರಿ : ರೈತರನ್ನು ಮಳೆರಾಯನಿಂದ ಹಿಡಿದು, ಪ್ರತಿಯಾಬ್ಬರೂ ವಂಚಿಸುತ್ತಾರೆ. ಅಲ್ಲೋ ಇಲ್ಲೋ ವಿರಳ ಸಂಖ್ಯೆಯಲ್ಲಿ ವಂಚನೆ ತಪ್ಪಿಸುವ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಅಂತಹ ಪ್ರಯತ್ನವೊಂದು ಬುಧವಾರ ವರದಿಯಾಗಿದೆ.

240 ಮೂಟೆ ನಕಲಿ ಗೊಬ್ಬರ ಸಾಗಿಸುತ್ತಿದ್ದ ಲಾರಿಯಾಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಕುಶಾಲನಗರದ ಕೆಲವು ಏಜೆಂಟರು ರೈತರಿಗೆ ನಕಲಿ ಗೊಬ್ಬರ ವಿತರಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಲಾರಿ ಅಡ್ಡಗಟ್ಟಿ ತಪಾಸಣೆ ಮಾಡಲಾಯಿತು. ಆಗ 240 ಮೂಟೆ ನಕಲಿ ಗೊಬ್ಬರ ಪತ್ತೆಯಾಗಿದೆ.

ತೋಟಗಾರಿಕೆ ಇಲಾಖೆ ಈ ಗೊಬ್ಬರ ನಕಲಿ ಎಂದು ದೃಢಪಡಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರು ಲಾರಿ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠ ರಾಮಚಂದ್ರರಾವ್‌ ಭೇಟಿ ನೀಡಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ಹೇಳಿದರು.

(ಯುಎನ್‌ಐ)


ಮುಖಪುಟ / ವಾರ್ತೆಗಳು

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
West Indies: 118 / 4, 46.4 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article