ದೇವಮಾನವರ ವಿರೋಧಿ ಎಚ್ಚೆನ್ ನಿಧನ
ಬ್ರಾಂಕೈಟಿಸ್ ಹಾಗೂ ನ್ಯುಮೋನಿಯಾಕ್ಕೆ ಬಲಿ
ಬೆಂಗಳೂರು : ಹಿರಿಯ ಗಾಂಧೀವಾದಿ ಹಾಗೂ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಸೋಮವಾರ(ಜ.31)ಬೆಳಗ್ಗೆ 7ಗಂಟೆ ಸುಮಾರಿನಲ್ಲಿ ನಗರದ ಮಯ್ಯಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯಸ್ಥಿತಿ ಗಂಭೀರವಾಗಿತ್ತು. ಉಬ್ಬಸ ರೋಗದಿಂದ ಬಳಲುತ್ತಿರುವ ಎಚ್ಚೆನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆ ಉಸಿರೆಳೆದರು.
ವೈಚಾರಿಕ ನಿಲುವಿನಿಂದ, ತಮ್ಮದೇ ಆದ ವಿಚಾರಗಳಿಂದ ಎಚ್ಚೆನ್ ಗುರ್ತಿಸಿಕೊಂಡಿದ್ದರು. ಎಚ್ಚೆನ್ ಹೆಸರು ಕೇಳಿದರೆ ಪವಾಡ ಪುರುಷರು ಗಡಗಡ ನಡುಗುತ್ತಿದ್ದರು. ಮೊನ್ನೆಯಷ್ಟೆ ಚೇತರಿಕೆ ಕಂಡಿದ್ದ ನರಸಿಂಹಯ್ಯ ಕಡೆಗೂ ಸಾವಿನ ಮನೆಯ ಅತಿಥಿಯಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
ಬ್ರಾಂಕೈಟಿಸ್ ಹಾಗೂ ನ್ಯುಮೋನಿಯಾಕ್ಕೆ ಬಲಿ
ಬೆಂಗಳೂರು : ಹಿರಿಯ ಗಾಂಧೀವಾದಿ ಹಾಗೂ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಸೋಮವಾರ(ಜ.31)ಬೆಳಗ್ಗೆ 7ಗಂಟೆ ಸುಮಾರಿನಲ್ಲಿ ನಗರದ ಮಯ್ಯಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯಸ್ಥಿತಿ ಗಂಭೀರವಾಗಿತ್ತು. ಉಬ್ಬಸ ರೋಗದಿಂದ ಬಳಲುತ್ತಿರುವ ಎಚ್ಚೆನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆ ಉಸಿರೆಳೆದರು.
ವೈಚಾರಿಕ ನಿಲುವಿನಿಂದ, ತಮ್ಮದೇ ಆದ ವಿಚಾರಗಳಿಂದ ಎಚ್ಚೆನ್ ಗುರ್ತಿಸಿಕೊಂಡಿದ್ದರು. ಎಚ್ಚೆನ್ ಹೆಸರು ಕೇಳಿದರೆ ಪವಾಡ ಪುರುಷರು ಗಡಗಡ ನಡುಗುತ್ತಿದ್ದರು. ಮೊನ್ನೆಯಷ್ಟೆ ಚೇತರಿಕೆ ಕಂಡಿದ್ದ ನರಸಿಂಹಯ್ಯ ಕಡೆಗೂ ಸಾವಿನ ಮನೆಯ ಅತಿಥಿಯಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು














