•  

ಶ್ರೀಕೃಷ್ಣ ಗಾರುಡಿಯಲ್ಲ ಇದು ‘ಗಾರುಡಿ-2003’

ಶುಕ್ರವಾರ, ಜನವರಿ 17, 2003, 5:30 [IST]
ಬೆಂಗಳೂರು : ಇದೇ ಮೊದಲ ಬಾರಿಗೆ ನೂರಾರು ಜಾದೂಗಾರರು ಭಾಗವಹಿಸುವ ‘ಗಾರುಡಿ-2003’ ಹೆಸರಿನ ಅಖಿಲ ಕರ್ನಾಟಕ ಜಾದೂಗಾರರ ಸಮ್ಮೇಳನ ನಗರದಲ್ಲಿ ನಡೆಯಲಿದೆ.

ಜಾದೂ ಕಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾದ್ರಿ ಜಾದೂ ಸಂಘಟನೆ ಏರ್ಪಡಿಸಿರುವ ಗಾರುಡಿ-2003 ಸಮ್ಮೇಳನ ರಾಜ್ಯ ಸರ್ಕಾರದ ಆಶ್ರಯದಲ್ಲಿ ಜ. 18 ಹಾಗೂ 19 ರಂದು ನಡೆಯಲಿದೆ. ಪುರಭವನದಲ್ಲಿ ನಡೆಯುವ ಈ ಸಮ್ಮೇಳನದ ನೇತೃತ್ವವನ್ನು ಪ್ರಸಿದ್ಧ ಜಾದೂಗಾರ ಪ್ರಹ್ಲಾದ ಆಚಾರ್ಯ ವಹಿಸುವರು.

ರಾಜ್ಯದ ನೂರಾರು ಹಿರಿಯ, ಕಿರಿಯ ಹಾಗೂ ಉದಯೋನ್ಮುಖ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ಹಿರಿಯರ ವಿಭಾಗ ಹಾಗೂ ಕಿರಿಯರ ವಿಭಾಗದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಜಾದೂಗಾರರಿಗೆ ವರ್ಷದ ಗಾರುಡಿಗ ಪ್ರಶಸ್ತಿ ನೀಡಲಾಗುವುದು.

ಜಾದೂ ಸಮ್ಮೇಳನದ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9844115234.

(ಇನ್ಫೋ ವಾರ್ತೆ)

Click here to go to top
ಮುಖಪುಟ / ಇವತ್ತು... ಈ ಹೊತ್ತು...


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Delhi Daredevils: 69 / 2, 7.6 Overs
1st Test , Lord's Cricket Ground, St John's Wood
West Indies: 227 / 7, 84.2 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article