ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ವರ್ಷ ಕಾಡು, ಈ ವರ್ಷ ನಾಡು : ಡಾ. ರಾಜ್ ಹರ್ಷ‌

By Super
|
Google Oneindia Kannada News

Rajkumar after release from clutches of Veerappan
ಬೆಂಗಳೂರು, ನ. 1 : ಕಳೆದ ವರ್ಷ ನಾನು ಕಾಡಿನಲ್ಲಿದ್ದೆ. ಈ ವರ್ಷ ನಾಡಿನಲ್ಲಿದ್ದೇನೆ, ನಿಮ್ಮ ನಡುವೆ ಇದ್ದೇನೆ. ತುಂಬಾ ಸಂತೋಷವಾಗಿದೆ.

ನಗರದ ಕುಮಾರ ಕೃಪ ರಸ್ತೆಯ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ , ಗುರುವಾರ ಬೆಳಗ್ಗೆ ಜರುಗಿದ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿ ಮಾತನಾಡುತ್ತಿದ್ದ ವರನಟ ಡಾ। ರಾಜ್‌ಕುಮಾರ್‌ ಭಾವುಕರಾಗಿದ್ದರು. ಜೊತೆಯಲ್ಲಿ ಪಾರ್ವತಮ್ಮ ಅವರಿದ್ದರು.

ಕಾಡಿನಲ್ಲಿದ್ದಾಗಲೂ ನನಗೆ ರಾಜ್ಯೋತ್ಸವದ ನೆನಪುಗಳು ಕಾಡುತ್ತಿದ್ದವು. ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಹೋದದ್ದಕ್ಕೆ ಸಂಕಟವಾಗಿತ್ತು . ಈ ವರ್ಷ ನಿಮ್ಮ ನಡುವೆ ಇರುವುದಕ್ಕೆ ಸಂತೋಷವಾಗಿದೆ. ಈಗ ಸಿಹಿ ತಿನ್ನುವ ಯೋಗ ಬಂದಿದೆ. ತಾಯಿ ಭುವನೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ರಾಜ್‌ ಹೇಳಿದರು.

ನಾಡಹಬ್ಬದ ಸಂಭ್ರಮದಲ್ಲಿ ರಾಜ್‌ ಅವರೊಂದಿಗೆ ಪುಟ್ಟದೊಂದು ಗುಂಪು ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನೆರೆದಿತ್ತು . ಪಾರ್ವತಮ್ಮನವರಿಗೆ ಸಿಹಿ ತಿನ್ನಿಸುವ ಮೂಲಕ ರಾಜ್‌ ಸಂಭ್ರಮ ಹಂಚಿಕೊಂಡರು. ನೆರೆದವರಿಗೂ ಸಿಹಿ ವಿತರಿಸಲಾಯಿತು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌.ಚಂದ್ರಶೇಖರ್‌, ಅಖಿಲ ಕರ್ನಾಟಕ ಡಾ।ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರನಟ ಶಿವಕುಮಾರ್‌, ಅಪ್ಪು ಪುನೀತ್‌ ರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

English summary
Kannada motion picture hero Dr. Rajkumars first public address after his release from the clutches of dreaded poacher Veerappans domain, Satyamangala forest. Dr Raj declared "Last year I was in forest, this year I am glad to be one among you, great day". The Kannada Rajyotsava meeting was organized by the Karnataka Film Chamber of Commerce in Kumara Krupa, Bangalore-Karnataka (01-11-2001)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X