ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಕ್ಕೆ ತಲೆ ಇಟ್ಟ ವಿದುರಾಶ್ವತ್ಥದ ದೊಡ್ಡಮರ, ವೃಕ್ಷರಾಜಾಯತೇ ನಮಃ !

By Staff
|
Google Oneindia Kannada News

ಕೋಲಾರ : ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ವಿದುರಾಶ್ವತ್ಥದ ಅಶ್ವತ್ಥನಾರಾಯಣ ಸ್ವಾಮಿ ದೇವಾಲಯದ ಎದುರು ನೂರಾರು ವರ್ಷಗಳಿಂದ ಕದಲದೇ ನಿಂತಿದ್ದ ಶತಮಾನಗಳಷ್ಟು ಹಳೆಯದಾದ ಬೃಹದಾಕಾರದ ಅಶ್ವತ್ಥವೃಕ್ಷ ನೆಲಕಚ್ಚಿದೆ. ಈ ವೃಕ್ಷದ ಕೆಳಭಾಗದಲ್ಲಿ ಸಾವಿರಾರು ಭಕ್ತಾದಿಗಳು ಪ್ರತಿಷ್ಠಾಪಿಸಿದ್ದ ಕೆಲವು ನಾಗರಕಲ್ಲು, ಪ್ರತಿಮೆಗಳಿಗೂ ಸಹ ಹಾನಿಯುಂಟಾಗಿದೆ ಎಂದು ವರದಿಗಳು ತಿಳಿಸಿವೆ.

ಮಹಾಭಾರತದ ವಿದುರನ ಉಲ್ಲೇಖವೂ ಇರುವ ಪುರಾಣ ಪ್ರಸಿದ್ಧ ಈ ಸ್ಥಳ, ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಅಶ್ವತ್ಥನಾರಾಯಣನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನೂರಾರು ವರ್ಷಗಳಿಂದ ನೆರಳಾಗಿ ನಿಂತಿದ್ದ ವೃಕ್ಷಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಪೂಜೆ ಸಲ್ಲಿಸುತ್ತಿದ್ದರು.

ಅಶ್ವತ್ಥವೃಕ್ಷದಲ್ಲಿ ಸೃಷ್ಟಿ, ಸ್ಥಿತಿ, ಲಯಕರ್ತರಾದ ತ್ರಿಮೂರ್ತಿಗಳಾದಿಯಾಗಿ ಮುಕ್ಕೋಟಿ ದೇವತೆಗಳೂ ನೆಲೆಸಿದ್ದಾರೆ. ಈ ವೃಕ್ಷಕ್ಕೆ ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ಎಂಬ ಶ್ಲೋಕವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕಿದರೆ ಬಂಜೆ ಎಂಬ ಪಟ್ಟಹೊತ್ತವರಿಗೂ ಮಕ್ಕಳಾಗುತ್ತದೆ ಎಂಬ ನಂಬಿಕೆ ಹಿಂದೂಗಳದು. ಇತಿಹಾಸ ಪರಂಪರೆಯ ಈ ಪುರಾತನ ವೃಕ್ಷವನ್ನು ಸಂರಕ್ಷಿಸಲು ಪ್ರಯತ್ನ ಮಾಡದ ದೇಗುಲದ ಆಡಳಿತ ಮಂಡಳಿಯನ್ನು ನಾಗರಿಕರು ಶಪಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X